<p><strong>ಮುಂಬೈ: </strong>ಬಿಗ್ ಬಾಸ್ ಸೀಸನ್ 15ರ ಮನೆಯಲ್ಲಿ ಅಭಿಜಿತ್ ಬಿಚುಕಲೆ ಮತ್ತು ದಿವೋಲಿನಾ ಭಟ್ಟಾಚಾರ್ಯ ನಡುವಿನ ಜಗಳ ಕೈ ಮೀರುವ ಎಲ್ಲ ಲಕ್ಷಣ ಕಂಡುಬರುತ್ತಿದೆ.</p>.<p>ತೀವ್ರ ಖಿನ್ನತೆಗೊಳಗಾದ ಅಭಿಜಿತ್, ನಿಶಾಂತ್ ಭಟ್ ಬಳಿ ತೆರಳಿ ಹೇರ್ ಕಲರ್ ಪಾಕೆಟ್ ಅನ್ನು ಕೇಳಿದ್ದು ಅದನ್ನು ವಿಷದ ರೀತಿ ಕುಡಿಯುವುದಾಗಿ ಹೇಳಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನನಗೆ ಅತೀವ ಬೇಸರ ಉಂಟಾಗಿದೆ ಎಂದಿದ್ದಾರೆ.</p>.<p>ಇದನ್ನು ಕೇಳಿ ಶಾಕ್ಗೆ ಒಳಗಾದ ನಿಶಾಂತ್, ಅಭಿಜಿತ್ ಅವರನ್ನು ಸಮಾಧಾನಪಡಿಸಿದ್ದಾರೆ. ‘ಆ ರೀತಿಯ ಪದಗಳನ್ನು ಇನ್ನೆಂದೂ ಬಳಸಬೇಡ’ಎಂದು ತಿಳಿ ಹೇಳಿದ್ದಾರೆ. ಬಳಿಕ ಈ ಘಟನೆಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಅಭಿಜಿತ್, ನಿಶಾಂತ್ ಬಳಿ ಮನವಿ ಮಾಡಿದ್ದಾರೆ. ಆದರೆ, ಅವರ ಮಾತನ್ನು ಕೇಳದ ನಿಶಾಂತ್, ಅಭಿಜಿತ್ ವಿಷ ಕುಡಿಯಲು ಮುಂದಾಗಿದ್ದರು ಎಂದು ಮನೆಯ ಸದಸ್ಯರ ಎದುರುಬಹಿರಂಗಪಡಿಸಿದ್ದಾರೆ.</p>.<p>ಈ ಮಧ್ಯೆ, ಅಂತಹ ನಿರ್ಧಾರಗಳನ್ನು ಎಂದಿಗೂ ಮಾಡಬೇಡಿ ಎಂದು ಅಭಿಜಿತ್ಗೆ ಪ್ರತೀಕ್ ಸೆಹಜ್ಪಾಲ್ಎಚ್ಚರಿಸಿದ್ದಾರೆ. ಬಿಗ್ ಬಾಸ್ ನಿಮ್ಮನ್ನು ಮನೆಯಿಂದ ಹೊರಹೋಗುವಂತೆ ಹೇಳಬಹುದು. ಅಫ್ಸಾನಾ ಖಾನ್ ಘಟನೆಯ ಉದಾಹರಣೆ ನೀಡಿದ ಪ್ರತೀಕ್, ಇಂತದ್ದೇ ಕಾರಣಕ್ಕೆ ಅವರನ್ನು ಮನೆಯಿಂದ ಹೊರಹಾಕಲಾಯಿತು ಎಂದು ತಿಳಿಸಿದರು.</p>.<p><strong>ಏನಿದು ಘಟನೆ?: </strong>ಬಿಗ್ ಬಾಸ್ 15ರ ಇತ್ತೀಚಿನ ಸಂಚಿಕೆಯಲ್ಲಿ, ಮ್ಯೂಸಿಯಂ ಟಾಸ್ಕ್ನ ಸಂದರ್ಭದಲ್ಲಿ ದಿವೋಲಿನಾ ಅವರ ಕಲಾಕೃತಿಗಳನ್ನು ಕದ್ದಿದ್ದ ಅಭಿಜಿತ್, ಅದನ್ನು ವಾಪಸ್ ಕೊಡಬೇಕೆಂದರೆ ಪ್ರತಿಯಾಗಿ ಕೆನ್ನೆಗೆ ಮುತ್ತು ನೀಡುವಂತೆ ಒತ್ತಾಯಿಸಿದ್ದರು. ಇದನ್ನು ನಿರಾಕರಿಸಿದ ದಿವೋಲಿನಾ, ಸೌಜನ್ಯದ ಎಲ್ಲೆ ಮೀರದಂತೆ ಎಚ್ಚರಿಕೆ ನೀಡಿದ್ದರು.</p>.<p>ಅಭಿಜಿತ್ನ ಉದ್ದೇಶಗಳು ಕೆಟ್ಟದಾಗಿವೆ. ಹಾಗಾಗಿ, ನಾನು ಅವನೊಂದಿಗೆ ಮಾತನಾಡುವುದಿಲ್ಲ ಅಥವಾ ಅವನೊಂದಿಗೆ ಮತ್ತೆ ಸ್ನೇಹ ಬೆಳೆಸುವುದಿಲ್ಲ ಎಂದು ದಿವೋಲಿನಾ ಹೇಳಿದ್ದರು.</p>.<p>ಹಿಂದಿನ ಘಟನೆ ಕುರಿತಂತೆ ಅಭಿಜಿತ್ ಅವರು ಹಲವು ಬಾರಿ ಕ್ಷಮೆಯಾಚಿಸಿದ್ದಾರೆ. ಆದರೆ, ದಿವೋಲಿನಾ ಮಾತ್ರ ಅವರ ಮಾತನ್ನು ಕೇಳಲು ಸಿದ್ಧರಿಲ್ಲ. ಹೀಗಾಗಿ, ಅಭಿಜಿತ್ ಖಿನ್ನತೆಗೆ ಒಳಗಾಗಿದ್ಧಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಬಿಗ್ ಬಾಸ್ ಸೀಸನ್ 15ರ ಮನೆಯಲ್ಲಿ ಅಭಿಜಿತ್ ಬಿಚುಕಲೆ ಮತ್ತು ದಿವೋಲಿನಾ ಭಟ್ಟಾಚಾರ್ಯ ನಡುವಿನ ಜಗಳ ಕೈ ಮೀರುವ ಎಲ್ಲ ಲಕ್ಷಣ ಕಂಡುಬರುತ್ತಿದೆ.</p>.<p>ತೀವ್ರ ಖಿನ್ನತೆಗೊಳಗಾದ ಅಭಿಜಿತ್, ನಿಶಾಂತ್ ಭಟ್ ಬಳಿ ತೆರಳಿ ಹೇರ್ ಕಲರ್ ಪಾಕೆಟ್ ಅನ್ನು ಕೇಳಿದ್ದು ಅದನ್ನು ವಿಷದ ರೀತಿ ಕುಡಿಯುವುದಾಗಿ ಹೇಳಿದ್ದಾರೆ. ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನನಗೆ ಅತೀವ ಬೇಸರ ಉಂಟಾಗಿದೆ ಎಂದಿದ್ದಾರೆ.</p>.<p>ಇದನ್ನು ಕೇಳಿ ಶಾಕ್ಗೆ ಒಳಗಾದ ನಿಶಾಂತ್, ಅಭಿಜಿತ್ ಅವರನ್ನು ಸಮಾಧಾನಪಡಿಸಿದ್ದಾರೆ. ‘ಆ ರೀತಿಯ ಪದಗಳನ್ನು ಇನ್ನೆಂದೂ ಬಳಸಬೇಡ’ಎಂದು ತಿಳಿ ಹೇಳಿದ್ದಾರೆ. ಬಳಿಕ ಈ ಘಟನೆಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಅಭಿಜಿತ್, ನಿಶಾಂತ್ ಬಳಿ ಮನವಿ ಮಾಡಿದ್ದಾರೆ. ಆದರೆ, ಅವರ ಮಾತನ್ನು ಕೇಳದ ನಿಶಾಂತ್, ಅಭಿಜಿತ್ ವಿಷ ಕುಡಿಯಲು ಮುಂದಾಗಿದ್ದರು ಎಂದು ಮನೆಯ ಸದಸ್ಯರ ಎದುರುಬಹಿರಂಗಪಡಿಸಿದ್ದಾರೆ.</p>.<p>ಈ ಮಧ್ಯೆ, ಅಂತಹ ನಿರ್ಧಾರಗಳನ್ನು ಎಂದಿಗೂ ಮಾಡಬೇಡಿ ಎಂದು ಅಭಿಜಿತ್ಗೆ ಪ್ರತೀಕ್ ಸೆಹಜ್ಪಾಲ್ಎಚ್ಚರಿಸಿದ್ದಾರೆ. ಬಿಗ್ ಬಾಸ್ ನಿಮ್ಮನ್ನು ಮನೆಯಿಂದ ಹೊರಹೋಗುವಂತೆ ಹೇಳಬಹುದು. ಅಫ್ಸಾನಾ ಖಾನ್ ಘಟನೆಯ ಉದಾಹರಣೆ ನೀಡಿದ ಪ್ರತೀಕ್, ಇಂತದ್ದೇ ಕಾರಣಕ್ಕೆ ಅವರನ್ನು ಮನೆಯಿಂದ ಹೊರಹಾಕಲಾಯಿತು ಎಂದು ತಿಳಿಸಿದರು.</p>.<p><strong>ಏನಿದು ಘಟನೆ?: </strong>ಬಿಗ್ ಬಾಸ್ 15ರ ಇತ್ತೀಚಿನ ಸಂಚಿಕೆಯಲ್ಲಿ, ಮ್ಯೂಸಿಯಂ ಟಾಸ್ಕ್ನ ಸಂದರ್ಭದಲ್ಲಿ ದಿವೋಲಿನಾ ಅವರ ಕಲಾಕೃತಿಗಳನ್ನು ಕದ್ದಿದ್ದ ಅಭಿಜಿತ್, ಅದನ್ನು ವಾಪಸ್ ಕೊಡಬೇಕೆಂದರೆ ಪ್ರತಿಯಾಗಿ ಕೆನ್ನೆಗೆ ಮುತ್ತು ನೀಡುವಂತೆ ಒತ್ತಾಯಿಸಿದ್ದರು. ಇದನ್ನು ನಿರಾಕರಿಸಿದ ದಿವೋಲಿನಾ, ಸೌಜನ್ಯದ ಎಲ್ಲೆ ಮೀರದಂತೆ ಎಚ್ಚರಿಕೆ ನೀಡಿದ್ದರು.</p>.<p>ಅಭಿಜಿತ್ನ ಉದ್ದೇಶಗಳು ಕೆಟ್ಟದಾಗಿವೆ. ಹಾಗಾಗಿ, ನಾನು ಅವನೊಂದಿಗೆ ಮಾತನಾಡುವುದಿಲ್ಲ ಅಥವಾ ಅವನೊಂದಿಗೆ ಮತ್ತೆ ಸ್ನೇಹ ಬೆಳೆಸುವುದಿಲ್ಲ ಎಂದು ದಿವೋಲಿನಾ ಹೇಳಿದ್ದರು.</p>.<p>ಹಿಂದಿನ ಘಟನೆ ಕುರಿತಂತೆ ಅಭಿಜಿತ್ ಅವರು ಹಲವು ಬಾರಿ ಕ್ಷಮೆಯಾಚಿಸಿದ್ದಾರೆ. ಆದರೆ, ದಿವೋಲಿನಾ ಮಾತ್ರ ಅವರ ಮಾತನ್ನು ಕೇಳಲು ಸಿದ್ಧರಿಲ್ಲ. ಹೀಗಾಗಿ, ಅಭಿಜಿತ್ ಖಿನ್ನತೆಗೆ ಒಳಗಾಗಿದ್ಧಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>