ಕೇರಳವನ್ನು ಭಯೋತ್ಪಾದಕ ಮಹಿಳೆಯರ ಮತಾಂತರ ತವರು ಎನ್ನುವ ಈ ಟೀಸರ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ತಮಿಳುನಾಡು ಮೂಲದ ಪತ್ರಕರ್ತರೊಬ್ಬರು ದೂರನ್ನು ದಾಖಲಿಸಿ, ಚಿತ್ರದಲ್ಲಿ ಹೇಳಿರುವ ವಿಷಯದ ಮಾಹಿತಿಗೆ ದಾಖಲೆ ಕೇಳಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ಪೊಲೀಸರಿಗೆ ದೂರಿನ ತನಿಖೆಗೆ ಆದೇಶಿಸಿದ್ದಾರೆ. ಟೀಸರ್ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ.