ಗೆಳೆಯ, ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿದ ಜ್ಯೂನಿಯರ್ ಎನ್ಟಿಆರ್, ‘ಅಪ್ಪು ಇಲ್ಲದ ಕರ್ನಾಟಕ ಶೂನ್ಯ ಅನಿಸುತ್ತಿದೆ. ಅವರ ಆಶೀರ್ವಾದ ನಮ್ಮ ಮೇಲೆ ಇರಲಿ. ಅವರ ನೆನಪಿನ ಈ ಹಾಡು ಹಾಡುತ್ತಿರುವುದು ಇದೇ ಮೊದಲು ಹಾಗೂ ಇದೇ ಕೊನೆ’ ಎಂದು ಹೇಳಿ ‘ಗೆಳೆಯಾ ಗೆಳೆಯಾ... ಗೆಲುವು ನಮ್ದೇನಯ್ಯಾ...’ ಎಂದು ಹಾಡು ಹಾಡಿ ಗೌರವ ಅರ್ಪಿಸಿದರು.