‘ಗದಾಯುದ್ಧ’ ಚಿತ್ರದ ಒಂದು ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮನಸ್ಸಿನೊಳಗಿರುವ ರಾಮ, ರಾವಣ, ಕೀಚಕ, ಭೀಮರ ಪಾತ್ರದ ತಿರುಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಸಾಧು ಕೋಕಿಲ ಪಕ್ಕಾ ಕುಡುಕನ ಹಾಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕ್ರಿಕೆಟಿಗ ಸುಮಿತ್ ಈ ಚಿತ್ರದ ನಾಯಕ. ಚಿತ್ರದ ಸೆನ್ಸಾರ್ ಮುಗಿದಿದೆ. ಶೀಘ್ರವೇ ತೆರೆಗೆ ಬರಲಿದೆ.
ಶ್ರೀವತ್ಸ ಈ ಚಿತ್ರದ ನಿರ್ದೇಶಕ. ಪೌರಾಣಿಕ ಮತ್ತು ಸಾಮಾಜಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ.