ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕನ್ನಡಿಗ'ನಾದ ರವಿಮಾಮ: ಶಿವಣ್ಣ ಧನಿಯಲ್ಲಿ ಸಿರಿಗನ್ನಡಂ ಏಳ್ಗೆ... 

Last Updated 23 ನವೆಂಬರ್ 2021, 10:32 IST
ಅಕ್ಷರ ಗಾತ್ರ

್ದೂಯನವನದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ’ಕನ್ನಡಿಗ’ ಸಿನಿಮಾದ ಟೈಟಲ್‌ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಈ ಹಾಡನ್ನು ಶಿವರಾಜ್‌ ಕುಮಾರ್‌ ಹಾಡಿರುವುದು ವಿಶೇಷ. ’ಸಿರಿಗನ್ನಡಂ ಏಳ್ಗೆ... ಕನ್ನಡಂ ಬಾಳ್ಗೆ... ಕನ್ನಡ ನಮ್ಮ ಪಾಲ್ಗೆ’ ಎಂಬ ಸಾಲುಗಳ ಹಾಡನ್ನು ಶಿವಣ್ಣ ಅದ್ಬುತವಾಗಿ ಹಾಡಿದ್ದಾರೆ. ಈ ಹಾಡಿಗೆ ರವಿಮಾಮ ಹಾಗೂ ಶಿವಣ್ಣ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ನಿರ್ದೇಶಕ ಸಂತೋಷ್‌ ಆನಂದ್ ರಾಮ್‌ ಬರೆದಿರುವ ಹಾಡಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡು ಮಂಗಳವಾರ ಮಧ್ಯಾಹ್ನ ಯುಟ್ಯೂಬ್‌ನಲ್ಲಿಬಿಡುಗಡೆಯಾಗಿದೆ.

ಬಿ.ಎಂ.ಗಿರಿರಾಜ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ರವಿಚಂದ್ರನ್ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದರಲ್ಲಿ ಗುಣಭದ್ರ ಎಂಬ ಪಾತ್ರ ಮಾಡಿದ್ದಾರೆ.

ಬಿಳಿ ಪಂಚೆ, ಶರ್ಟ್‌, ಗಿರಿಜಾ ಮೀಸೆ ಹಾಗೂ ತಲೆಯ ಮೇಲೆ ಮುಂಡಾಸು ಧರಿಸಿರುವ ರವಿಚಂದ್ರನ್ ಅವರ ಈ ಲುಕ್ ಅಭಿಮಾನಿಗಳ ಮನ ಗೆದ್ದಿದೆ. ಐತಿಹಾಸಿಕ ಕಥಾ ಹಿನ್ನೆಲೆ ಹೊಂದಿರುವ ಸಿನಿಮಾದ ಶೂಟಿಂಗ್ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ನಡೆಯುತ್ತಿದೆ.

ಕನ್ನಡ–ಇಂಗ್ಲಿಷ್ ಶಬ್ದಕೋಶವನ್ನು ಹೊರತಂದ ಫರ್ಡಿನಾಂಡ್ ಕಿಟೆಲ್ ಅವರ ಕುರಿತಾದ ಸಿನಿಮಾ ಇದಾಗಿದೆ. ಇದರಲ್ಲಿ ನಟಿಪಾವನಾ ರವಿಚಂದ್ರನ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಜಯಶ್ರೀ, ಬಾಲಾಜಿ ಮನೋಹರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT