ಸುಶಾಂತ್ ಸಿಂಗ್ ರಜಪೂತ್ – ಸಾರಾ ಅಲಿಖಾನ್ ನಟಿಸಿರುವ ಈ ಚಿತ್ರ, 2013ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ಕಥೆಯನ್ನಾಗಿ ಹೊಂದಿದೆ. ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೀತಿಸುವ ಕಥೆ ಇದಾಗಿದ್ದು, ಉಭಯ ಕೋಮುಗಳ ನಡುವೆ ಗಲಾಟೆಯಾಗುವ ಸಂಭವ ಇರುವುದರಿಂದ ಡೆಹ್ರಾಡೂನ್, ಹರಿದ್ವಾರ, ನೈನಿತಾಲ್, ಉದ್ಧಂಸಿಂಗ್ ನಗರ, ಪೌರಿ, ತೆಹ್ರಿ ಮತ್ತು ಅಲ್ಮೊರಾ ಜಿಲ್ಲೆಗಳಲ್ಲಿ ನಿಷೇಧ ವಿಧಿಸಲಾಗಿದೆ ಎಂದು ಸೆನ್ಸಾರ್ ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.