ನಟ ಡಾಲಿ ಧನಂಜಯ, ನಿರ್ದೇಶಕ ದಿನಕರ್ ತೂಗುದೀಪ್ ಸೇರಿದಂತೆ ಅಲ್ಲಿದ್ದ ಗಣ್ಯರೆಲ್ಲ ಕೈಯ್ಯಲ್ಲಿ ದೊಡ್ಡ ಮೀನುಗಳನ್ನು ಹಿಡಿದುಕೊಂಡಿದ್ದರು. ಬಲೆ, ಬುಟ್ಟಿ, ಜಾಗಂಟೆ, ಒರಳುಕಲ್ಲು...ಬೆಂಗಳೂರಿನ ಮಲ್ಲತ್ತಳ್ಳಿ ಕೆರೆ ದಂಡೆ ಒಂದು ರೀತಿ ಮಲೆನಾಡಿನ ಒಂದು ಸಂಸ್ಕೃತಿಯ ಪ್ರತಿರೂಪದಂತಿತ್ತು. ಇದಕ್ಕೆಲ್ಲ ಕಾರಣವಾಗಿದ್ದು, ‘ಕೆರೆಬೇಟೆ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ.