‘ಒಂದು ಹಳ್ಳಿಯಲ್ಲಿ ಒಮ್ಮೆ ಬರ ಪರಿಸ್ಥಿತಿ ಉದ್ಭವಿಸಿತ್ತಂತೆ. ಮಳೆಗಾಗಿ ಪ್ರಾರ್ಥಿಸಲು ಗ್ರಾಮಸ್ಥರೆಲ್ಲ ಒಂದೆಡೆ ಸೇರಿದರಂತೆ. ಆಗ ಒಬ್ಬ ಬಾಲಕ ಛತ್ರಿ ಹಿಡಿದುಕೊಂಡು ಬಂದಿದ್ದನಂತೆ. ಆತನನ್ನು ಕೆಲವರು ಮೂರ್ಖ ಎಂದರೆ ಇನ್ನು ಕೆಲವರು ಅತಿಯಾದ ಆತ್ಮವಿಶ್ವಾಸ ಎಂದರಂತೆ. ಆತನದು ನಂಬಿಕೆಯಾಗಿತ್ತು. ಆ ಬಾಲಕನಂತೆಯೇ ಈಗ ನಾನು. ನನಗೆ ನಂಬಿಕೆ ಇತ್ತು. ಇಂದು ಅದರ ಪರಿಣಾಮ ಕಾಣುತ್ತಿದ್ದೇನೆ. ಈ ಯಶಸ್ಸಿಗೆ ನಾನು ಕೇವಲ ಧನ್ಯವಾದ ಹೇಳಿದರಷ್ಟೇ ಸಾಲದು, ಇದು ನನಗೆ ತಿಳಿದಿದೆ. ಆದರೆ ನಿಜವಾಗಿಯೂ ನಾನೀಗ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ಆಶೀರ್ವದಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು. ಇಡೀ ಕೆಜಿಎಫ್ ತಂಡದ ಪರವಾಗಿಯೂ ನಿಮಗೆ ಧನ್ಯವಾದಗಳು. ನಿಮಗೊಂದು ಅದ್ಭುತ ಸಿನಿಮಾ ಅನುಭವ ನೀಡಬೇಕೆಂದು ನಾವೆಲ್ಲರೂ ಬಯಸಿದ್ದೆವು. ನೀವದನ್ನು ಆಸ್ವಾದಿಸುತ್ತಿದ್ದೀರಿ, ಮುಂದೆಯೂ ಆಸ್ವಾದಿಸಲಿದ್ದೀರಿ ಎಂದು ಭಾವಿಸುತ್ತೇನೆ’ ಎಂದು ವಿಡಿಯೊ ಸಂದೇಶದಲ್ಲಿ ಯಶ್ ಹೇಳಿದ್ದಾರೆ.