<p>ನಟ ಶಿವರಾಜ್ಕುಮಾರ್ ಅಭಿನಯಿಸುತ್ತಿರುವ 124ನೇ ಸಿನಿಮಾ ‘ನೀ ಸಿಗೋವರೆಗೂ’ ಚಿತ್ರದ ಮುಹೂರ್ತ ಮಂಗಳವಾರ ನಡೆದಿದ್ದು, ನಟ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.</p>.<p>ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಮ್ ಧುಲಿಪುಡಿ ಇದನ್ನು ನಿರ್ದೇಶಿಸಲಿದ್ದಾರೆ. ‘ಆ.19ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಲಿದೆ. ಜನವರಿಯಲ್ಲಿ ಚಿತ್ರೀಕರಣ ಪೂರ್ಣಗೊಂಡು, 2022ರ ಏಪ್ರಿಲ್ ವೇಳೆಗೆ ಚಿತ್ರವು ತೆರೆಗೆ ಬರುವ ಸಾಧ್ಯತೆ ಇದೆ’ ಎಂದು ಶಿವರಾಜ್ಕುಮಾರ್ ಹೇಳಿದರು.</p>.<p>‘ಇದೊಂದು ಭಾವನಾತ್ಮಕ ಪ್ರೇಮಕಥೆ. ಇದರಲ್ಲಿ ಎರಡು ಶೇಡ್ಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಸೇನಾ ಅಧಿಕಾರಿಯ ಪಾತ್ರದಲ್ಲೂ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕಳೆದ ಮೂರು ವರ್ಷದಿಂದ ‘ಮಫ್ತಿ’, ‘ಟಗರು’, ‘ದಿ ವಿಲನ್’ ರೀತಿಯ ಚಿತ್ರಗಳಲ್ಲಿ ನಾನು ನಟಿಸಿದ್ದೆ. ಇದೀಗ ಪ್ರೇಮಕಥೆಯ ಚಿತ್ರ. ಈ ಚಿತ್ರಕ್ಕೆ ನಾನೇ ಶೀರ್ಷಿಕೆಯ ಸಲಹೆ ನೀಡಿದ್ದೆ. ‘ಭಜರಂಗಿ–2’ ಚಿತ್ರದಲ್ಲಿ ಬರುವ ಹಾಡಿನಲ್ಲಿ ಈ ಸಾಲಿದೆ’ ಎನ್ನುತ್ತಾರೆ ಶಿವರಾಜ್ಕುಮಾರ್.</p>.<p>ಮಾತಿನಲ್ಲೇ ಶಿವಣ್ಣನ ಕಾಲೆಳೆದ ಸುದೀಪ್: ‘ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬಂದ ಹಾಗೆ ನಟರಿಗೆ ಬೇಡಿಕೆ ಕಡಿಮೆ ಆಗುತ್ತದೆ. ಇದು ಸಾಮಾನ್ಯ. ಆದರೆ, ಒಬ್ಬ ವ್ಯಕ್ತಿಯಲ್ಲಿ ಸಿನಿಮಾ ಮೇಲಿರುವ ಪ್ರೀತಿ, ಶಿಸ್ತು ಇದ್ದಾಗ ಮಾತ್ರ ಈ ರೀತಿ ಸಾಧನೆ ಮಾಡುವುದು ಸಾಧ್ಯ. ಇದು ಶಿವಣ್ಣ ತಮ್ಮನ್ನು ತಾವು ಹೇಗೆ ಸಿನಿಮಾಗೆ ಅರ್ಪಿಸಿಕೊಂಡಿದ್ದಾರೆ ಎನ್ನುವುದನ್ನು ವಿವರಿಸುತ್ತದೆ. ನಾವು 124ನೇ ಸಿನಿಮಾ ಮಾಡುವಷ್ಟರಲ್ಲಿ ತಂದೆಯ ಪಾತ್ರ ಮಾಡುವ ಸ್ಥಿತಿಗೆ ಬಂದಿರುತ್ತೇವೆ. ಈ ಸಂದರ್ಭದಲ್ಲಿ ನನಗೆ ಖುಷಿಯೂ ಇದೆ ಬೇಸರವೂ ಇದೆ. ನಮಗೆ ಯಾರೂ ಪ್ರೇಮಕಥೆಯೇ ಬರೆಯುತ್ತಿಲ್ಲ. ಆದರೆ ಶಿವಣ್ಣ ಇವತ್ತೂ ಪ್ರೇಮಕಥೆಯ ಚಿತ್ರಗಳನ್ನೇ ಮಾಡುತ್ತಿದ್ದಾರೆ. ನಾನೂ ಶಿವಣ್ಣ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಹೊಂದಿದ್ದೇನೆ. ಈ ಕುರಿತು ಅವರ ಬಳಿಯೂ ಈಗಷ್ಟೇ ಮಾತನಾಡಿದ್ದೇನೆ. ಶಿವಣ್ಣನೂ ಇದಕ್ಕೆ ಒಪ್ಪಿದ್ದಾರೆ’ ಎಂದರು.</p>.<p>ಇನ್ನು ‘ಶಿವರಾಜ್ಕುಮಾರ್ ಅವರನ್ನು ‘ಶಿವಣ್ಣ’ ಎಂದು ಕರೆಯಬೇಡಿ. ಇದೊಂದು ಪ್ರೇಮಕಥೆಯ ಸಿನಿಮಾ. ಚಿತ್ರೀಕರಣ ಮುಗಿಯುವವರೆಗೂ ಅವರನ್ನು ಡಾರ್ಲಿಂಗ್ ಎನ್ನಿ’ ಎಂದು ಚಿತ್ರದ ನಾಯಕಿ ಮೆಹ್ರೀನ್ ಪಿರ್ಝಾದಾ ಅವರಿಗೆ ಸುದೀಪ್ ಹೇಳಿದರು.</p>.<p>ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ರವಿಕುಮಾರ್ ಸನಾ ಅವರ ಛಾಯಾಗ್ರಹಣವಿದೆ. ‘ಟಗರು’ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ಶಿವರಾಜ್ಕುಮಾರ್ ಅಭಿನಯಿಸುತ್ತಿರುವ 124ನೇ ಸಿನಿಮಾ ‘ನೀ ಸಿಗೋವರೆಗೂ’ ಚಿತ್ರದ ಮುಹೂರ್ತ ಮಂಗಳವಾರ ನಡೆದಿದ್ದು, ನಟ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.</p>.<p>ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಮ್ ಧುಲಿಪುಡಿ ಇದನ್ನು ನಿರ್ದೇಶಿಸಲಿದ್ದಾರೆ. ‘ಆ.19ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಲಿದೆ. ಜನವರಿಯಲ್ಲಿ ಚಿತ್ರೀಕರಣ ಪೂರ್ಣಗೊಂಡು, 2022ರ ಏಪ್ರಿಲ್ ವೇಳೆಗೆ ಚಿತ್ರವು ತೆರೆಗೆ ಬರುವ ಸಾಧ್ಯತೆ ಇದೆ’ ಎಂದು ಶಿವರಾಜ್ಕುಮಾರ್ ಹೇಳಿದರು.</p>.<p>‘ಇದೊಂದು ಭಾವನಾತ್ಮಕ ಪ್ರೇಮಕಥೆ. ಇದರಲ್ಲಿ ಎರಡು ಶೇಡ್ಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಸೇನಾ ಅಧಿಕಾರಿಯ ಪಾತ್ರದಲ್ಲೂ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕಳೆದ ಮೂರು ವರ್ಷದಿಂದ ‘ಮಫ್ತಿ’, ‘ಟಗರು’, ‘ದಿ ವಿಲನ್’ ರೀತಿಯ ಚಿತ್ರಗಳಲ್ಲಿ ನಾನು ನಟಿಸಿದ್ದೆ. ಇದೀಗ ಪ್ರೇಮಕಥೆಯ ಚಿತ್ರ. ಈ ಚಿತ್ರಕ್ಕೆ ನಾನೇ ಶೀರ್ಷಿಕೆಯ ಸಲಹೆ ನೀಡಿದ್ದೆ. ‘ಭಜರಂಗಿ–2’ ಚಿತ್ರದಲ್ಲಿ ಬರುವ ಹಾಡಿನಲ್ಲಿ ಈ ಸಾಲಿದೆ’ ಎನ್ನುತ್ತಾರೆ ಶಿವರಾಜ್ಕುಮಾರ್.</p>.<p>ಮಾತಿನಲ್ಲೇ ಶಿವಣ್ಣನ ಕಾಲೆಳೆದ ಸುದೀಪ್: ‘ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬಂದ ಹಾಗೆ ನಟರಿಗೆ ಬೇಡಿಕೆ ಕಡಿಮೆ ಆಗುತ್ತದೆ. ಇದು ಸಾಮಾನ್ಯ. ಆದರೆ, ಒಬ್ಬ ವ್ಯಕ್ತಿಯಲ್ಲಿ ಸಿನಿಮಾ ಮೇಲಿರುವ ಪ್ರೀತಿ, ಶಿಸ್ತು ಇದ್ದಾಗ ಮಾತ್ರ ಈ ರೀತಿ ಸಾಧನೆ ಮಾಡುವುದು ಸಾಧ್ಯ. ಇದು ಶಿವಣ್ಣ ತಮ್ಮನ್ನು ತಾವು ಹೇಗೆ ಸಿನಿಮಾಗೆ ಅರ್ಪಿಸಿಕೊಂಡಿದ್ದಾರೆ ಎನ್ನುವುದನ್ನು ವಿವರಿಸುತ್ತದೆ. ನಾವು 124ನೇ ಸಿನಿಮಾ ಮಾಡುವಷ್ಟರಲ್ಲಿ ತಂದೆಯ ಪಾತ್ರ ಮಾಡುವ ಸ್ಥಿತಿಗೆ ಬಂದಿರುತ್ತೇವೆ. ಈ ಸಂದರ್ಭದಲ್ಲಿ ನನಗೆ ಖುಷಿಯೂ ಇದೆ ಬೇಸರವೂ ಇದೆ. ನಮಗೆ ಯಾರೂ ಪ್ರೇಮಕಥೆಯೇ ಬರೆಯುತ್ತಿಲ್ಲ. ಆದರೆ ಶಿವಣ್ಣ ಇವತ್ತೂ ಪ್ರೇಮಕಥೆಯ ಚಿತ್ರಗಳನ್ನೇ ಮಾಡುತ್ತಿದ್ದಾರೆ. ನಾನೂ ಶಿವಣ್ಣ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಹೊಂದಿದ್ದೇನೆ. ಈ ಕುರಿತು ಅವರ ಬಳಿಯೂ ಈಗಷ್ಟೇ ಮಾತನಾಡಿದ್ದೇನೆ. ಶಿವಣ್ಣನೂ ಇದಕ್ಕೆ ಒಪ್ಪಿದ್ದಾರೆ’ ಎಂದರು.</p>.<p>ಇನ್ನು ‘ಶಿವರಾಜ್ಕುಮಾರ್ ಅವರನ್ನು ‘ಶಿವಣ್ಣ’ ಎಂದು ಕರೆಯಬೇಡಿ. ಇದೊಂದು ಪ್ರೇಮಕಥೆಯ ಸಿನಿಮಾ. ಚಿತ್ರೀಕರಣ ಮುಗಿಯುವವರೆಗೂ ಅವರನ್ನು ಡಾರ್ಲಿಂಗ್ ಎನ್ನಿ’ ಎಂದು ಚಿತ್ರದ ನಾಯಕಿ ಮೆಹ್ರೀನ್ ಪಿರ್ಝಾದಾ ಅವರಿಗೆ ಸುದೀಪ್ ಹೇಳಿದರು.</p>.<p>ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ರವಿಕುಮಾರ್ ಸನಾ ಅವರ ಛಾಯಾಗ್ರಹಣವಿದೆ. ‘ಟಗರು’ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>