<p>ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಾಗ ಅದರ ಟ್ರೇಲರ್ ತೋರಿಸುವುದು ಸರ್ವೇ ಸಾಮಾನ್ಯ. ಆದರೆ, ಮೊದಲೇ ಎಂಟು ನಿಮಿಷದ ಟ್ರೇಲರ್ ಮಾಡಿ ಬಳಿಕ ಶೂಟಿಂಗ್ ಆರಂಭಿಸಿದ್ದು, ‘ಕೊಡೆಮುರುಗ’ ಚಿತ್ರದ ವಿಶೇಷ. ಇದಕ್ಕೆ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಕಾರಣಗಳನ್ನೂ ಸುದ್ದಿಗೋಷ್ಠಿಯಲ್ಲಿ ಬಿಡಿಸಿಟ್ಟರು.</p>.<p>ಕಿರುತೆರೆಯಲ್ಲಿ ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ಅವರು ಬೆಳ್ಳಿತೆರೆಯಲ್ಲಿ ಮೊದಲ ಹೆಜ್ಜೆ ಇಡುವ ಖುಷಿಯಲ್ಲಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಅವರು ಹಲವು ನಿರ್ಮಾಪಕರ ಬಳಿ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಾಗ ಅವರಿಂದ ಎದುರಿಸಿದ ಅವಮಾನವೇ ಈ ಸಿನಿಮಾದ ಕಥಾವಸ್ತುವಾಗಿದೆಯಂತೆ.</p>.<p>‘ನನ್ನ ಪತ್ನಿಗೆ ಕಥೆಯ ಒಂದು ಎಳೆ ಹೇಳಿದೆ. ಮೊದಲಿಗೆ ಅವಳಿಂದಲೂ ತಿರಸ್ಕಾರ ಬಂತು. ಕೊನೆಗೆ, ಕಥೆಯ ಬಗ್ಗೆ ಸಂಪೂರ್ಣ ವಿವರ ನೀಡಿದಾಗ ಆಕೆ ಮಾನಸಿಕ ಸ್ಥೈರ್ಯ ತುಂಬಿದಳು’ ಎಂದು ನೆನಪಿಸಿಕೊಂಡರು.</p>.<p>‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನ ಪಾತ್ರ ನಿರ್ವಹಿಸುತ್ತಿರುವ ಮುನಿಕೃಷ್ಣ ಅವರೇ ಚಿತ್ರದ ನಾಯಕ. ಮುರುಗನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ತೆರೆಯ ಮೇಲೆ ಅವರನ್ನು ಅವಮಾನ ಮಾಡಿಕೊಂಡೇ ಕಥೆ ಹೊಸೆಯಲಾಗಿದೆಯಂತೆ. ಸಿನಿಮಾದಲ್ಲೊಂದು ಸಿನಿಮಾ ನಡೆಯುವುದೇ ಇದರ ವಿಶೇಷ ಎಂಬುದು ಚಿತ್ರತಂಡದ ವಿವರಣೆ. ಪಲ್ಲವಿಗೌಡ ಈ ಚಿತ್ರದ ನಾಯಕಿ. ‘ರೆಟ್ರೊ, ಕ್ಯೂಟ್, ಪೊಲೀಸ್ ಹೀಗೆ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖುಷಿಯಿದೆ’ ಎಂದು ಹೇಳಿಕೊಂಡರು.</p>.<p>ನಾಯಕ ಮುನಿರತ್ನ ಕಥೆಯ ಬಗ್ಗೆ ಹೇಳಿದಾಗ ತಕ್ಷಣಕ್ಕೆ ಒಪ್ಪಿಕೊಳ್ಳಲಿಲ್ಲವಂತೆ. ನಾನು ಖಳನಟನ ಪಾತ್ರ ಮಾಡುತ್ತೇನೆ. ಹೀರೊ ಆಗಿ ನಟಿಸುವುದಿಲ್ಲ ಎಂದು ಹೇಳಿದರಂತೆ. ‘ಕೊನೆಗೆ, ನನ್ನ ಪಾತ್ರದ ಮಹತ್ವ ಕುರಿತು ಹೇಳಿದಾಗ ಒಪ್ಪಿಕೊಂಡೆ’ ಎಂದರು.</p>.<p>ಚಿತ್ರದ ನಾಲ್ಕು ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದಾರೆ. ಕೈಲಾಸ್ ಖೇರ್, ವಿಜಯಪ್ರಕಾಶ್, ಚಂದನ್ಶೆಟ್ಟಿ, ಶಿವಂ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಹಿಂದೆ ‘ಮಮ್ಮಿ’ ಚಿತ್ರ ನಿರ್ಮಿಸಿದ್ದ ಕೆ. ರವಿಕುಮಾರ್ ಮತ್ತು ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಾಗ ಅದರ ಟ್ರೇಲರ್ ತೋರಿಸುವುದು ಸರ್ವೇ ಸಾಮಾನ್ಯ. ಆದರೆ, ಮೊದಲೇ ಎಂಟು ನಿಮಿಷದ ಟ್ರೇಲರ್ ಮಾಡಿ ಬಳಿಕ ಶೂಟಿಂಗ್ ಆರಂಭಿಸಿದ್ದು, ‘ಕೊಡೆಮುರುಗ’ ಚಿತ್ರದ ವಿಶೇಷ. ಇದಕ್ಕೆ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಕಾರಣಗಳನ್ನೂ ಸುದ್ದಿಗೋಷ್ಠಿಯಲ್ಲಿ ಬಿಡಿಸಿಟ್ಟರು.</p>.<p>ಕಿರುತೆರೆಯಲ್ಲಿ ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ಅವರು ಬೆಳ್ಳಿತೆರೆಯಲ್ಲಿ ಮೊದಲ ಹೆಜ್ಜೆ ಇಡುವ ಖುಷಿಯಲ್ಲಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಅವರು ಹಲವು ನಿರ್ಮಾಪಕರ ಬಳಿ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಾಗ ಅವರಿಂದ ಎದುರಿಸಿದ ಅವಮಾನವೇ ಈ ಸಿನಿಮಾದ ಕಥಾವಸ್ತುವಾಗಿದೆಯಂತೆ.</p>.<p>‘ನನ್ನ ಪತ್ನಿಗೆ ಕಥೆಯ ಒಂದು ಎಳೆ ಹೇಳಿದೆ. ಮೊದಲಿಗೆ ಅವಳಿಂದಲೂ ತಿರಸ್ಕಾರ ಬಂತು. ಕೊನೆಗೆ, ಕಥೆಯ ಬಗ್ಗೆ ಸಂಪೂರ್ಣ ವಿವರ ನೀಡಿದಾಗ ಆಕೆ ಮಾನಸಿಕ ಸ್ಥೈರ್ಯ ತುಂಬಿದಳು’ ಎಂದು ನೆನಪಿಸಿಕೊಂಡರು.</p>.<p>‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನ ಪಾತ್ರ ನಿರ್ವಹಿಸುತ್ತಿರುವ ಮುನಿಕೃಷ್ಣ ಅವರೇ ಚಿತ್ರದ ನಾಯಕ. ಮುರುಗನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ತೆರೆಯ ಮೇಲೆ ಅವರನ್ನು ಅವಮಾನ ಮಾಡಿಕೊಂಡೇ ಕಥೆ ಹೊಸೆಯಲಾಗಿದೆಯಂತೆ. ಸಿನಿಮಾದಲ್ಲೊಂದು ಸಿನಿಮಾ ನಡೆಯುವುದೇ ಇದರ ವಿಶೇಷ ಎಂಬುದು ಚಿತ್ರತಂಡದ ವಿವರಣೆ. ಪಲ್ಲವಿಗೌಡ ಈ ಚಿತ್ರದ ನಾಯಕಿ. ‘ರೆಟ್ರೊ, ಕ್ಯೂಟ್, ಪೊಲೀಸ್ ಹೀಗೆ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖುಷಿಯಿದೆ’ ಎಂದು ಹೇಳಿಕೊಂಡರು.</p>.<p>ನಾಯಕ ಮುನಿರತ್ನ ಕಥೆಯ ಬಗ್ಗೆ ಹೇಳಿದಾಗ ತಕ್ಷಣಕ್ಕೆ ಒಪ್ಪಿಕೊಳ್ಳಲಿಲ್ಲವಂತೆ. ನಾನು ಖಳನಟನ ಪಾತ್ರ ಮಾಡುತ್ತೇನೆ. ಹೀರೊ ಆಗಿ ನಟಿಸುವುದಿಲ್ಲ ಎಂದು ಹೇಳಿದರಂತೆ. ‘ಕೊನೆಗೆ, ನನ್ನ ಪಾತ್ರದ ಮಹತ್ವ ಕುರಿತು ಹೇಳಿದಾಗ ಒಪ್ಪಿಕೊಂಡೆ’ ಎಂದರು.</p>.<p>ಚಿತ್ರದ ನಾಲ್ಕು ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದಾರೆ. ಕೈಲಾಸ್ ಖೇರ್, ವಿಜಯಪ್ರಕಾಶ್, ಚಂದನ್ಶೆಟ್ಟಿ, ಶಿವಂ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಹಿಂದೆ ‘ಮಮ್ಮಿ’ ಚಿತ್ರ ನಿರ್ಮಿಸಿದ್ದ ಕೆ. ರವಿಕುಮಾರ್ ಮತ್ತು ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>