<p><strong>ಬೆಂಗಳೂರು</strong>: ಉತ್ತರ ಕರ್ನಾಟಕದ ಯುವ ರೈತನ ಕಥಾ ಹಂದರವನ್ನು ಒಳಗೊಂಡಿರುವ ನಟ ನವೀನ್ ಶಂಕರ್ ಅವರ ‘ಕ್ಷೇತ್ರಪತಿ’ ಸಿನಿಮಾದ ಟ್ರೇಲರ್ ಯುಟ್ಯೂಬ್ನಲ್ಲಿ ಗುರುವಾರ ಬಿಡುಗಡೆಯಾಗಿದೆ.</p><p>Gultoo ಖ್ಯಾತಿಯ ನವೀನ್ ಶಂಕರ್ ಅವರ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಖಡಕ್ ಸಂಭಾಷಣೆಗಳು ಚಿತ್ರ ರಸಿಕರ ಗಮನ ಸೆಳೆದಿವೆ. ಇಲ್ಲಿವರೆಗೆ 1.65 ಲಕ್ಷ ವೀಕ್ಷಣೆ ಕಂಡಿದೆ.</p><p>ಆಗಸ್ಟ್ 18ರಂದು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕ್ಷೇತ್ರಪತಿ ಬಿಡುಗಡೆಯಾಗಲಿದೆ.</p><p>ಉತ್ತರ ಕರ್ನಾಟಕದ ಜವಾರಿ ಭಾಷಾ ಶೈಲಿಯಲ್ಲಿ ತಯಾರಾಗಿರುವ ಚಿತ್ರದಲ್ಲಿ, ಉತ್ತರ ಕರ್ನಾಟಕದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗದಗ, ತಿಮ್ಮಾಪುರ, ಲಕ್ಕುಂಡಿ, ವಿಜಯಪುರ, ಇಳಕಲ್ ಹಾಗೂ ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ದೇಶದ ರೈತ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಹೋರಾಟದ ಕಥೆಯನ್ನು ಒಳಗೊಂಡಿದೆ.</p><p>ಶ್ರೀಕಾಂತ್ ಕಟಗಿ ನಿರ್ದೇನದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿ 3 ಹಾಡುಗಳನ್ನು ಬರೆದಿದ್ದಾರೆ. ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಚಿತ್ರದ ನಾಯಕಿ. ಅಚ್ಯುತ್ ಕುಮಾರ್, ಸರ್ದಾರ್, ರಾಹುಲ್ ಐನಾಪುರ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಉತ್ತರ ಕರ್ನಾಟಕದ ಯುವ ರೈತನ ಕಥಾ ಹಂದರವನ್ನು ಒಳಗೊಂಡಿರುವ ನಟ ನವೀನ್ ಶಂಕರ್ ಅವರ ‘ಕ್ಷೇತ್ರಪತಿ’ ಸಿನಿಮಾದ ಟ್ರೇಲರ್ ಯುಟ್ಯೂಬ್ನಲ್ಲಿ ಗುರುವಾರ ಬಿಡುಗಡೆಯಾಗಿದೆ.</p><p>Gultoo ಖ್ಯಾತಿಯ ನವೀನ್ ಶಂಕರ್ ಅವರ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಖಡಕ್ ಸಂಭಾಷಣೆಗಳು ಚಿತ್ರ ರಸಿಕರ ಗಮನ ಸೆಳೆದಿವೆ. ಇಲ್ಲಿವರೆಗೆ 1.65 ಲಕ್ಷ ವೀಕ್ಷಣೆ ಕಂಡಿದೆ.</p><p>ಆಗಸ್ಟ್ 18ರಂದು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕ್ಷೇತ್ರಪತಿ ಬಿಡುಗಡೆಯಾಗಲಿದೆ.</p><p>ಉತ್ತರ ಕರ್ನಾಟಕದ ಜವಾರಿ ಭಾಷಾ ಶೈಲಿಯಲ್ಲಿ ತಯಾರಾಗಿರುವ ಚಿತ್ರದಲ್ಲಿ, ಉತ್ತರ ಕರ್ನಾಟಕದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗದಗ, ತಿಮ್ಮಾಪುರ, ಲಕ್ಕುಂಡಿ, ವಿಜಯಪುರ, ಇಳಕಲ್ ಹಾಗೂ ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ದೇಶದ ರೈತ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಹೋರಾಟದ ಕಥೆಯನ್ನು ಒಳಗೊಂಡಿದೆ.</p><p>ಶ್ರೀಕಾಂತ್ ಕಟಗಿ ನಿರ್ದೇನದ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿ 3 ಹಾಡುಗಳನ್ನು ಬರೆದಿದ್ದಾರೆ. ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಚಿತ್ರದ ನಾಯಕಿ. ಅಚ್ಯುತ್ ಕುಮಾರ್, ಸರ್ದಾರ್, ರಾಹುಲ್ ಐನಾಪುರ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>