‘ಟ್ರೇಲರ್ನಲ್ಲಿ ತಂಡ ಕಥೆಯ ಎಳೆಯನ್ನು ಬಿಟ್ಟುಕೊಡದೆ ಕುತೂಹಲ ಕಾಯ್ದುಕೊಂಡಿದೆ. ಅಲೋಪತಿ ಕುರಿತು ನಂಬಿಕೆ ಕಡಿಮೆಯಾಗುತ್ತಿದೆ. ಕೋವಿಡ್ ಲಸಿಕೆ ಕುರಿತು ಜಗತ್ತಿನೆಲ್ಲೆಡೆ ನಡೆದ ಸಂಗತಿಗಳನ್ನು ನಾವು ನೋಡಿದ್ದೇವೆ. ಆಯುರ್ವೇದಕ್ಕೆ ಮೊರೆ ಹೋಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಾಟಿ ವೈದ್ಯ ಪದ್ಧತಿಯನ್ನು ನಂಬಿಕೊಂಡು ಬಂದ ಒಂದು ಇಡೀ ಕುಟುಂಬ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿರುವುದು ಖುಷಿಯ ವಿಷಯ. ಸಮಾಜಕ್ಕೆ ಸಂದೇಶ ಕೊಡಬೇಕು, ರೋಗಿಗಳಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಮಾಡಿರುವ ಚಿತ್ರವನ್ನು ನಾವೆಲ್ಲ ಬೆಂಬಲಿಸಬೇಕು ಎಂದು ದೇವರಾಜ್ ಹೇಳಿದರು.