‘ನಮ್ಮ ಪ್ರೀತಿಯ ಕೃಷ್ಣ ಅವರ ಅಗಲಿಕೆಯ ಬಗ್ಗೆ ನಾವು ನಿಮಗೆ ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಚಿತ್ರರಂಗದ ಸೂಪರ್ಸ್ಟಾರ್ ಆಗಿದ್ದ ಅವರು ಪ್ರೀತಿ, ವಿನಮ್ರತೆ ಮತ್ತು ಸಹಾನುಭೂತಿಯಿಂದ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿದ್ದರು. ಅವರು ನಿಧನರಾದರೂ ಅವರ ಕೆಲಸದ ಮೂಲಕ ನಮ್ಮ ನಡುವೆಯೇ ಇರುತ್ತಾರೆ. ಇನ್ಮುಂದೆ ನಾವು ಅವರನ್ನು ಪ್ರತಿ ದಿನವೂ ಮಿಸ್ ಮಾಡಿಕೊಳ್ಳುತ್ತೇವೆ. ಕೃಷ್ಣ ಅವರ ಹೇಳಿದಂತೆ ವಿದಾಯಗಳು ಶಾಶ್ವತವಲ್ಲ. ಮತ್ತೆ ಭೇಟಿಯಾಗುವವರೆಗೆ’ ಎಂದು ಘಟ್ಟಮನೇನಿ ಕುಟುಂಬ (ಮಹೇಶ್ ಬಾಬು ಕುಟುಂಬ) ಟ್ವೀಟ್ ಮಾಡಿದೆ.