<p><strong>ಹೈದರಾಬಾದ್</strong>: ರಿಯಲ್ ಎಸ್ಟೇಟ್ ಕಂಪನಿ ಸಾಯಿ ಸೂರ್ಯ ಡೆವಲಪರ್ಸ್ನ ಬ್ರಾಂಡ್ ಅಂಬಾಸಿಡರ್ ಆಗಿರುವ ತೆಲುಗು ನಟ ಮಹೇಶ್ ಬಾಬು ಅವರಿಗೆ ಕಂಪನಿ ವಿರುದ್ಧದ ವಂಚನೆ ಪ್ರಕರಣವೊಂದರಲ್ಲಿ ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗವು ನೋಟಿಸ್ ಜಾರಿ ಮಾಡಿದ್ದು, ಅವರನ್ನು ಮೂರನೇ ಪ್ರತಿವಾದಿಯನ್ನಾಗಿ ಹೆಸರಿಸಿದೆ.</p><p>ಪ್ರಕರಣದ ಮೂವರು ಪ್ರತಿವಾದಿಗಳಿಗೂ ಲೀಗಲ್ ನೋಟಿಸ್ ನೀಡಲಾಗಿದೆ.</p><p>ರಿಯಲ್ ಎಸ್ಟೇಟ್ ಕಂಪನಿಯ ಭರವಸೆಗಳನ್ನು ನಂಬಿ ವೈದ್ಯೆ ಮತ್ತು ಇನ್ನೊಬ್ಬ ವ್ಯಕ್ತಿ ಬಾಲಾಪುರದಲ್ಲಿ ಪ್ಲಾಟ್ಗಳನ್ನು ಖರೀದಿಸಲು ₹34.80 ಲಕ್ಷ ಪಾವತಿಸಿದ್ದಾರೆ. ಪ್ರಚಾರದ ಪೋಸ್ಟರ್ನಲ್ಲಿ ಮಹೇಶ್ ಬಾಬು ಅವರ ಛಾಯಾಚಿತ್ರ ಕಂಡು ಆಕರ್ಷಿತರಾಗಿ ಪ್ಲಾಟ್ ಖರೀದಿಸಲು ಹಣ ಪಾವತಿಸಿದ್ದೆವು ಎಂದು ಅವರು ಹೇಳಿದ್ದಾರೆ.</p><p>ಪ್ಲಾಟ್ ನೀಡಲು ಕಂಪನಿ ವಿಫಲವಾದ ಹಿನ್ನೆಲೆ ಖರೀದಿದಾರರು ಮರುಪಾವತಿಗೆ ಒತ್ತಾಯಿಸಿದ್ದಾರೆ. ಎರಡನೇ ಪ್ರತಿವಾದಿಯು ಆರ್ಥಿಕ ತೊಂದರೆಯನ್ನು ಉಲ್ಲೇಖಿಸಿ ಕಂತುಗಳಲ್ಲಿ ಕೇವಲ ₹15 ಲಕ್ಷ ಹಿಂದಿರುಗಿಸಿದ್ದಾರೆ. ಉಳಿದ ಹಣ ನೀಡದೇ ಇದ್ದ ಕಾರಣ ಖರೀದಿದಾರರು ಗ್ರಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.</p><p>ಇದೇ ಏಪ್ರಿಲ್ ತಿಂಗಳಲ್ಲಿ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನ ಗ್ರೂಪ್ ಒಳಗೊಂಡ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ)ಮಹೇಶ್ ಬಾಬು ಅವರನ್ನು ತನಿಖೆಗೆ ಒಳಪಡಿಸಿತ್ತು.</p><p>ಮಹೇಶ್ ಬಾಬು ಪ್ರಸ್ತುತ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ರಿಯಲ್ ಎಸ್ಟೇಟ್ ಕಂಪನಿ ಸಾಯಿ ಸೂರ್ಯ ಡೆವಲಪರ್ಸ್ನ ಬ್ರಾಂಡ್ ಅಂಬಾಸಿಡರ್ ಆಗಿರುವ ತೆಲುಗು ನಟ ಮಹೇಶ್ ಬಾಬು ಅವರಿಗೆ ಕಂಪನಿ ವಿರುದ್ಧದ ವಂಚನೆ ಪ್ರಕರಣವೊಂದರಲ್ಲಿ ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗವು ನೋಟಿಸ್ ಜಾರಿ ಮಾಡಿದ್ದು, ಅವರನ್ನು ಮೂರನೇ ಪ್ರತಿವಾದಿಯನ್ನಾಗಿ ಹೆಸರಿಸಿದೆ.</p><p>ಪ್ರಕರಣದ ಮೂವರು ಪ್ರತಿವಾದಿಗಳಿಗೂ ಲೀಗಲ್ ನೋಟಿಸ್ ನೀಡಲಾಗಿದೆ.</p><p>ರಿಯಲ್ ಎಸ್ಟೇಟ್ ಕಂಪನಿಯ ಭರವಸೆಗಳನ್ನು ನಂಬಿ ವೈದ್ಯೆ ಮತ್ತು ಇನ್ನೊಬ್ಬ ವ್ಯಕ್ತಿ ಬಾಲಾಪುರದಲ್ಲಿ ಪ್ಲಾಟ್ಗಳನ್ನು ಖರೀದಿಸಲು ₹34.80 ಲಕ್ಷ ಪಾವತಿಸಿದ್ದಾರೆ. ಪ್ರಚಾರದ ಪೋಸ್ಟರ್ನಲ್ಲಿ ಮಹೇಶ್ ಬಾಬು ಅವರ ಛಾಯಾಚಿತ್ರ ಕಂಡು ಆಕರ್ಷಿತರಾಗಿ ಪ್ಲಾಟ್ ಖರೀದಿಸಲು ಹಣ ಪಾವತಿಸಿದ್ದೆವು ಎಂದು ಅವರು ಹೇಳಿದ್ದಾರೆ.</p><p>ಪ್ಲಾಟ್ ನೀಡಲು ಕಂಪನಿ ವಿಫಲವಾದ ಹಿನ್ನೆಲೆ ಖರೀದಿದಾರರು ಮರುಪಾವತಿಗೆ ಒತ್ತಾಯಿಸಿದ್ದಾರೆ. ಎರಡನೇ ಪ್ರತಿವಾದಿಯು ಆರ್ಥಿಕ ತೊಂದರೆಯನ್ನು ಉಲ್ಲೇಖಿಸಿ ಕಂತುಗಳಲ್ಲಿ ಕೇವಲ ₹15 ಲಕ್ಷ ಹಿಂದಿರುಗಿಸಿದ್ದಾರೆ. ಉಳಿದ ಹಣ ನೀಡದೇ ಇದ್ದ ಕಾರಣ ಖರೀದಿದಾರರು ಗ್ರಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.</p><p>ಇದೇ ಏಪ್ರಿಲ್ ತಿಂಗಳಲ್ಲಿ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನ ಗ್ರೂಪ್ ಒಳಗೊಂಡ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ)ಮಹೇಶ್ ಬಾಬು ಅವರನ್ನು ತನಿಖೆಗೆ ಒಳಪಡಿಸಿತ್ತು.</p><p>ಮಹೇಶ್ ಬಾಬು ಪ್ರಸ್ತುತ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>