‘ಸಂದೀಪ್ ಅವರು ದೇಶಕ್ಕಾಗಿ ಕೊನೆಯ ಕ್ಷಣದವರೆಗೂ ಹೋರಾಡಿ ಜೀವ ತ್ಯಾಗ ಮಾಡಿದ್ದಾರೆ. ಆದರೆ ನನಗೆ ಅವರು ಬದುಕಿದ ರೀತಿ ನಿಜಕ್ಕೂ ಇಷ್ಟವಾಗಿತ್ತು. ಅವರ ಬಗ್ಗೆ ವಿವರಿಸಲು ನವೆಂಬರ್ 26 ಒಂದು ಚಾಪ್ಟರ್ ಅಲ್ಲ, ಆದರೆ ಅದು ಅವರ ಜೀವನದ ಮುಖ್ಯ ಭಾಗ. ಇಂತಹ ಹಲವು ಚಾಪ್ಟರ್ಗಳಿರುವ ಒಂದು ಪುಸ್ತಕ ಅವರ ಕಥೆ. ಆ ಕಾರಣಕ್ಕೆ ಅವರ ಬಗ್ಗೆ ಚಿತ್ರ ಮಾಡಲು ಹೊರಟಿದ್ದೇನೆ’ ಎಂದು ಅಡವಿ ಶೇಷ್ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.