‘ಮಹಿಷಾಸುರ’ ಚಿತ್ರ ಪೂರ್ಣಗೊಳಿಸಿದ ಖುಷಿಯಲ್ಲಿ ನಿರ್ದೇಶಕ ಉದಯ್ ಪ್ರಸನ್ನ, ಎರಡನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಅಣಿಯಾಗಿದ್ದಾರೆ. ಅವರ ನಿರ್ದೇಶನದ ಎರಡನೆ ಚಿತ್ರ ‘ಬೆಣ್ಣೆಗುಲ್ಕನ್’. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ಮಾಡುವ ದೊಡ್ಡ ಯೋಜನೆ ಅವರದು. ಚಿತ್ರದ ಕಥಾವಸ್ತು ಮತ್ತು ನಿರೂಪಣೆ ವಿಭಿನ್ನವಾಗಿರಲಿದ್ದು, ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವುದು ಅವರ ವಿಶ್ವಾಸದ ನುಡಿ.