‘ಟಗರು’ ನಲ್ಲಿ ಡಾಲಿಯಾಗಿ ಕಾಣಿಸಿಕೊಂಡಿದ್ದ ಧನಂಜಯ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಮ್ಗೋಪಾಲ ವರ್ಮ ಅವರ ಕ್ಯಾಂಪಿಗೆ ಹಾರಿದ್ದರು. ಆರ್ಜಿವಿ ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನದ ಬಹುಭಾಷಾ ಚಿತ್ರ ‘ಭೈರವಗೀತ’ದಲ್ಲಿ ನಾಯಕನಾಗಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಹಾಗೆಯೇ ‘ಟಗರು’ ಚಿತ್ರವನ್ನು ವೀಕ್ಷಿಸಿದ ಆರ್ಜಿವಿ, ಮಾನ್ವಿತಾ ಕಾಮತ್ ಅವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮುಂಗಡ ಹಣ ಕೊಟ್ಟಿರುವುದೂ ಸುದ್ದಿಯಾಗಿತ್ತು.