<p class="title"><strong>ಚೆನ್ನೈ: </strong>ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣಂ ಅವರ ಅಂತಿಮ ವಿಧಿವಿಧಾನ ತಮಿಳುನಾಡಿನ ತಿರುವಳ್ಳೂರ್ನತಾಮರೈಪಕ್ಕಂನಲ್ಲಿರುವ ರೆಡ್ ಹಿಲ್ಸ್ ಫಾರ್ಮ್ಹೌಸ್ನಲ್ಲಿ ಜರುಗಿತು.</p>.<p class="title">ಇದಕ್ಕೂ ಮೊದಲುಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳು, ಪ್ರಮುಖರು ಶುಕ್ರವಾರ ಫಾರ್ಮ್ ಹೌಸ್ ಬಳಿ ಮುಗಿಬಿದ್ದಿದ್ದರು.</p>.<p class="title">ಕೋವಿಡ್-19ರಿಂದ ಮೃತಪಟ್ಟಿದ್ದ ಹಿರಿಯ ಗಾಯಕನ ಅಂತಿಮ ದರ್ಶನಕ್ಕೆ ಇದ್ದ ನಿಬಂಧನೆಗಳ ನಡುವೆಯೂಹೆಸರಾಂತ ವ್ಯಕ್ತಿಗಳು, ಸಾಮಾನ್ಯರು, ಅಭಿಮಾನಿಗಳು ಫಾರ್ಮ್ ಹೌಸ್ ಬಳಿ ಗುಂಪುಗೂಡಿದ್ದರು.</p>.<p class="title">ಮುಂಜಾಗ್ರತೆಯಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಲಾಗಿತ್ತು. ಸಾಲುಗಟ್ಟಿ ಬಂದ ಅಭಿಮಾನಿಗಳು ಎಸ್.ಪಿ.ಬಿ ಅವರ ಶರೀರದ ಅಂತಿಮ ದರ್ಶನ ಪಡೆದರು.</p>.<p class="title">ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ತಿರುವಳ್ಳುರ ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್, ಚಿತ್ರ ನಿರ್ದೇಶಕ ಭಾರತಿರಾಜಾ, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್, ಹಾಸ್ಯ ನಟ ಮಯಿಲ್ ಸಾಮಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು.</p>.<p class="title">ಅಭಿಮಾನಿಗಳ ಗುಂಪು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿಯೋಜಿತ ಸ್ಥಳದಲ್ಲಿ ಮಾತ್ರವೇ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪುತ್ರ ಚರಣ್ ನಡೆಸಿಕೊಡುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಚೆನ್ನೈ: </strong>ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣಂ ಅವರ ಅಂತಿಮ ವಿಧಿವಿಧಾನ ತಮಿಳುನಾಡಿನ ತಿರುವಳ್ಳೂರ್ನತಾಮರೈಪಕ್ಕಂನಲ್ಲಿರುವ ರೆಡ್ ಹಿಲ್ಸ್ ಫಾರ್ಮ್ಹೌಸ್ನಲ್ಲಿ ಜರುಗಿತು.</p>.<p class="title">ಇದಕ್ಕೂ ಮೊದಲುಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳು, ಪ್ರಮುಖರು ಶುಕ್ರವಾರ ಫಾರ್ಮ್ ಹೌಸ್ ಬಳಿ ಮುಗಿಬಿದ್ದಿದ್ದರು.</p>.<p class="title">ಕೋವಿಡ್-19ರಿಂದ ಮೃತಪಟ್ಟಿದ್ದ ಹಿರಿಯ ಗಾಯಕನ ಅಂತಿಮ ದರ್ಶನಕ್ಕೆ ಇದ್ದ ನಿಬಂಧನೆಗಳ ನಡುವೆಯೂಹೆಸರಾಂತ ವ್ಯಕ್ತಿಗಳು, ಸಾಮಾನ್ಯರು, ಅಭಿಮಾನಿಗಳು ಫಾರ್ಮ್ ಹೌಸ್ ಬಳಿ ಗುಂಪುಗೂಡಿದ್ದರು.</p>.<p class="title">ಮುಂಜಾಗ್ರತೆಯಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಲಾಗಿತ್ತು. ಸಾಲುಗಟ್ಟಿ ಬಂದ ಅಭಿಮಾನಿಗಳು ಎಸ್.ಪಿ.ಬಿ ಅವರ ಶರೀರದ ಅಂತಿಮ ದರ್ಶನ ಪಡೆದರು.</p>.<p class="title">ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ತಿರುವಳ್ಳುರ ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್, ಚಿತ್ರ ನಿರ್ದೇಶಕ ಭಾರತಿರಾಜಾ, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್, ಹಾಸ್ಯ ನಟ ಮಯಿಲ್ ಸಾಮಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು.</p>.<p class="title">ಅಭಿಮಾನಿಗಳ ಗುಂಪು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿಯೋಜಿತ ಸ್ಥಳದಲ್ಲಿ ಮಾತ್ರವೇ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪುತ್ರ ಚರಣ್ ನಡೆಸಿಕೊಡುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>