ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ, ‘ಓಯ್ ಕಮಲಿ...’ ಹಾಡನ್ನು ಬಿಡುಗಡೆ ಮಾಡಿ ನಿರ್ದೇಶಕ ದೀಪಕ್ ಅವರು ಚಿತ್ರದ ಬಗ್ಗೆ ಮಾತನಾಡಿದರು. ‘ಇದು ಕಾದಂಬರಿ ಆಧರಿತ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಬಳಿಕ ಕಾದಂಬರಿ ಆಧರಿತ ಚಿತ್ರ ಬರುತ್ತಿದೆ. ಹನಗೋಡು ಎಂಬ ಊರಿನ ಜನರ ನಂಬಿಕೆಯೊಂದನ್ನು ಆಧಾರವಾಗಿಟ್ಟು ಬರೆದ ಕಥೆ ಇದರಲ್ಲಿದೆ. ಅಲ್ಲಿನ ಬೆಟ್ಟವೊಂದರಲ್ಲಿ ದರೋಡೆಕೋರರು ಇದ್ದರು ಎಂಬ ಐತಿಹ್ಯ ಇದೆ. ಅದನ್ನು ಎಳೆಯಾಗಿಟ್ಟುಕೊಂಡು ಊರಿನ ಎರಡು ಓಣಿಗಳ ಯುವಕರ ನಡುವಿನ ಜಗಳ, ಹಳ್ಳಿ ರಾಜಕೀಯ, ಪ್ರೀತಿ– ಪ್ರೇಮ... ಇವೆಲ್ಲವನ್ನೂ ಹೆಣೆದು ಚಿತ್ರ ಮಾಡಿದ್ದೇವೆ ಎಂದು ಕಥೆಯ ಸಣ್ಣ ಝಲಕ್ ನೀಡಿದರು.