ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಕಲಾವಿದರು ಮತ್ತು ಗಣ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿರುವ ಬಗ್ಗೆ ನಟ ಜಗ್ಗೇಶ್ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮನರಂಜನಾ ತೆರಿಗೆ ಸಂಗ್ರಹವಾಗುತ್ತಿದೆ ಎಂಬುದನ್ನುನೆನಪಿಡಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಮಹಾತ್ಮ ಗಾಂಧಿ ಸ್ಮರಿಸಿದ ಬಾಲಿವುಡ್
ಈ ದೇಶದ ಚಿತ್ರರಂಗಬಹುಭಾಷಾ ಭಾವನೆಯಿಂದ ಕೂಡಿದೆ ವಿನಾ ಹಿಂದಿ ಸಿನಿಮಾರಂಗದಿಂದ ಅಲ್ಲ ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಿಕೊಡುವ ಕನ್ನಡ ಮನಸ್ಸುಗಳು ಇಲ್ಲವೇ ಎಂದು ವಿಷಾದವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸಿನಿಮಾರಂಗ ಅಂದರೇ ಕೇವಲ ಖಾನ್ಗಳು ಮಾತ್ರವಲ್ಲ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ಕರ್ನಾಟಕದಲ್ಲಿ ಹೆಚ್ಚು #Entertainment #tax #collection ಕನ್ನಡದ ನೆಲ ಚಿತ್ರರಂಗದಿಂದ! ನಟರಿಂದ ಆಗುತ್ತಿದೆ!ನೆನಪಿಡಿ!
— ನವರಸನಾಯಕ ಜಗ್ಗೇಶ್ (@Jaggesh2) October 20, 2019
ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಹ ಹಿಂದಿ ಚಿತ್ರರಂಗದಿಂದ ಅಲ್ಲಾ!ಈ ವಿಷಯ ಮನವರಿಕೆ ಮಾಡುವ
ಕನ್ನಡ ಮನಸ್ಸುಗಳು ಇಲ್ಲವೆ ರಾಷ್ಟ್ರಕ್ಕೆ!ತುಂಬಾ ದುಃಖವಾಯಿತು!
ಖಾನ್ ಗಳಲ್ಲಾ ಚಿತ್ರರಂಗ!
ಗಾಂಧೀಜಿಯ 150ನೇ ಜನ್ಮದಿನಾಚರಣೆ ಅಂಗವಾಗಿ ನಿರ್ಮಿಸಿದ ‘ಚೇಂಜ್ ವಿತ್ಇನ್’ ಎಂಬ ವಿಡಿಯೊ ಬಿಡುಗಡೆ ಮಾಡಿದಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ಕಲಾವಿದರು ಮತ್ತು ಗಣ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡದ ಸಿನಿಮಾ ನಟರು ಮತ್ತು ಗಣ್ಯರು ಭಾಗವಹಿಸಿರಲಿಲ್ಲ.
ಕನ್ನಡಿಗರು ಬಹುತೇಕ ಪರಭಾಷೆ ನಟ ನಟಿಯರಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ಇಂದು ಕನ್ನಡಿಗರು ದಾರಿತಪ್ಪಿದವರಂತೆ ಆಗಿದ್ದಾರೆ.ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲು ಕಮ್ಮಿಇಲ್ಲ, ಖಾನ್ಗಳು ಮಾತ್ರವೇಕಲಾರಂಗಕ್ಕೆ ಒಡೆಯರಲ್ಲ! ನಿಮ್ಮ ಭಾವನೆಗಳನ್ನು ಗೌರವಿಸಲು ಅನೇಕ ಕನ್ನಡದ ಕಲಿಗಳು ಇದ್ದಾರೆ ಎನ್ನುವ ಮೂಲಕ ಮೋದಿಗೆ ಜಗ್ಗೇಶ್ ಟಾಂಗ್ ನೀಡಿದ್ದಾರೆ.
ಕನ್ನಡಿಗರು ಇಂದು ಬಹುತೇಕ ಪರಭಾಷೆ #stars ಗಳಿಗೆ ಚಪ್ಪಾಳೆ ಹೊಡೆದತಪ್ಪಿಗೆ ನಾವು #ಕನ್ನಡಿಗರು ದಾರಿತಪ್ಪಿದವರಂತೆ
— ನವರಸನಾಯಕ ಜಗ್ಗೇಶ್ (@Jaggesh2) October 20, 2019
ಆಗಿದ್ದೇವೆ! @narendramodi
Ji!ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲು ಕಮ್ಮಿಇಲ್ಲಾ!
ಶಾರುಖ್ ಅಮಿರ್ ಅಲ್ಲಾ ಕಲಾರಂಗಕ್ಕೆ ಒಡೆಯರು!ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ!ನಿಮ್ಮ ಭಾವನೆ ಗೌರವಿಸಲು!
ಜೈಹಿಂದ್!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.