<p>‘ಶುಗರ್ಲೆಸ್’ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟ ರಾಕ್ಲೈನ್ ಸುಧಾಕರ್ ಅವರ ನಿಧನದಿಂದ ಖಾಲಿಯಾದ ಜಾಗವನ್ನು ತುಂಬುತ್ತಿದ್ದಾರೆ ತುಳು ಚಿತ್ರ ನಟ ‘ಕುಸೆಲ್ದರಸೆ’ ನವೀನ್ ಡಿ. ಪಡೀಲ್.</p>.<p>ಸುಧಾಕರ್ ಅವರ ಪಾತ್ರದ ಹಲವಾರು ಸನ್ನಿವೇಶಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಈಗ ಅದೇ ದೃಶ್ಯಗಳನ್ನು ನವೀನ್ ಅವರೊಂದಿಗೆ ಚಿತ್ರಿಸಲಾಗಿದೆ.</p>.<p>‘ಸುಧಾಕರ್ ನಿಧನರಾದ ಕೆಲವು ದಿನಗಳ ನಂತರ ನಿರ್ದೇಶಕ ಶಶಿಕಾಂತ್ ಸೇರಿದಂತೆ ಚಿತ್ರದ ತಂಡದ ಹಲವರು ನನನ್ನು ಸಂಪರ್ಕಿಸಿದರು. ತಕ್ಷಣವೇ ಚಿತ್ರೀಕರಣಕ್ಕೆ ಒಪ್ಪಿದೆ. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡೆ.ಈ ಪಾತ್ರ ನನಗೆ ಉತ್ಸಾಹ ತುಂಬಿದೆ’ ಎಂದು ನವೀನ್ ಹೇಳಿದ್ದಾರೆ.</p>.<p>‘ಇದರಲ್ಲಿ ಸುಧಾಕರ್ ಅವರದ್ದು ಮಂಗಳೂರಿನವರ ಪಾತ್ರ. ಆ ಪಾತ್ರ ನನಗೆ ಸಿಕ್ಕಿದೆ. ದತ್ತಣ್ಣನಂಥ ಹಿರಿಯ, ಅನುಭವಿ ಕಲಾವಿದರೊಂದಿಗೆ ನಟಿಸುವುದು ಒಂದು ಖುಷಿಯ ವಿಚಾರ’ ಎಂದು ನವೀನ್ ಹೇಳಿದ್ದಾರೆ.</p>.<p>ನವೀನ್ ತುಳು ರಂಗಭೂಮಿಯ ಖ್ಯಾತ ಹಾಸ್ಯ ಕಲಾವಿದ. ಈ ಹಾಸ್ಯ ಪಾತ್ರಗಳಿಂದಾಗಿಯೇ ಅವರನ್ನು ಕರಾವಳಿ ಭಾಗದಲ್ಲಿ ‘ಕುಸೆಲ್ದರಸೆ’ (ತಮಾಷೆಯ ಅರಸ) ಎಂದುಅಭಿಮಾನಿಗಳುಕರೆಯುತ್ತಾರೆ. ಹತ್ತಾರು ತುಳು ಚಿತ್ರಗಳಲ್ಲಿ ನಟಿಸಿದ, ಬಿರ್ಸೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅನುಭವಿ ಅವರು.</p>.<p>ಮಧುಮೇಹ ನಿಭಾಯಿಸುವ ಯುವಕನಾಗಿ ಚಿತ್ರದಲ್ಲಿ ಪ್ರಥ್ವಿ ಇದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಜೋಡಿಯಾಗಲಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ ಭೀಮಸೇನ ನಳಮಹಾರಾಜ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಶುಗರ್ಲೆಸ್’ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟ ರಾಕ್ಲೈನ್ ಸುಧಾಕರ್ ಅವರ ನಿಧನದಿಂದ ಖಾಲಿಯಾದ ಜಾಗವನ್ನು ತುಂಬುತ್ತಿದ್ದಾರೆ ತುಳು ಚಿತ್ರ ನಟ ‘ಕುಸೆಲ್ದರಸೆ’ ನವೀನ್ ಡಿ. ಪಡೀಲ್.</p>.<p>ಸುಧಾಕರ್ ಅವರ ಪಾತ್ರದ ಹಲವಾರು ಸನ್ನಿವೇಶಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಈಗ ಅದೇ ದೃಶ್ಯಗಳನ್ನು ನವೀನ್ ಅವರೊಂದಿಗೆ ಚಿತ್ರಿಸಲಾಗಿದೆ.</p>.<p>‘ಸುಧಾಕರ್ ನಿಧನರಾದ ಕೆಲವು ದಿನಗಳ ನಂತರ ನಿರ್ದೇಶಕ ಶಶಿಕಾಂತ್ ಸೇರಿದಂತೆ ಚಿತ್ರದ ತಂಡದ ಹಲವರು ನನನ್ನು ಸಂಪರ್ಕಿಸಿದರು. ತಕ್ಷಣವೇ ಚಿತ್ರೀಕರಣಕ್ಕೆ ಒಪ್ಪಿದೆ. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡೆ.ಈ ಪಾತ್ರ ನನಗೆ ಉತ್ಸಾಹ ತುಂಬಿದೆ’ ಎಂದು ನವೀನ್ ಹೇಳಿದ್ದಾರೆ.</p>.<p>‘ಇದರಲ್ಲಿ ಸುಧಾಕರ್ ಅವರದ್ದು ಮಂಗಳೂರಿನವರ ಪಾತ್ರ. ಆ ಪಾತ್ರ ನನಗೆ ಸಿಕ್ಕಿದೆ. ದತ್ತಣ್ಣನಂಥ ಹಿರಿಯ, ಅನುಭವಿ ಕಲಾವಿದರೊಂದಿಗೆ ನಟಿಸುವುದು ಒಂದು ಖುಷಿಯ ವಿಚಾರ’ ಎಂದು ನವೀನ್ ಹೇಳಿದ್ದಾರೆ.</p>.<p>ನವೀನ್ ತುಳು ರಂಗಭೂಮಿಯ ಖ್ಯಾತ ಹಾಸ್ಯ ಕಲಾವಿದ. ಈ ಹಾಸ್ಯ ಪಾತ್ರಗಳಿಂದಾಗಿಯೇ ಅವರನ್ನು ಕರಾವಳಿ ಭಾಗದಲ್ಲಿ ‘ಕುಸೆಲ್ದರಸೆ’ (ತಮಾಷೆಯ ಅರಸ) ಎಂದುಅಭಿಮಾನಿಗಳುಕರೆಯುತ್ತಾರೆ. ಹತ್ತಾರು ತುಳು ಚಿತ್ರಗಳಲ್ಲಿ ನಟಿಸಿದ, ಬಿರ್ಸೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅನುಭವಿ ಅವರು.</p>.<p>ಮಧುಮೇಹ ನಿಭಾಯಿಸುವ ಯುವಕನಾಗಿ ಚಿತ್ರದಲ್ಲಿ ಪ್ರಥ್ವಿ ಇದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಜೋಡಿಯಾಗಲಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ ಭೀಮಸೇನ ನಳಮಹಾರಾಜ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>