ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರತಿಭೆಗಳ ‘ದ್ವಂದ್ವ’

Last Updated 2 ಜನವರಿ 2023, 10:17 IST
ಅಕ್ಷರ ಗಾತ್ರ

ಎಂಬಿಎ ಮುಗಿಸಿ, ಎಂಎನ್‌ಸಿದಲ್ಲಿ ಉದ್ಯೋಗ ಮಾಡುತ್ತಿರುವ ಇಬ್ಬರು ಗೆಳೆಯರು ಸೇರಿಕೊಂಡು ‘ದ್ವಂದ್ವ’ ಚಿತ್ರ ನಿರ್ಮಿಸುತ್ತಿದ್ದಾರೆ.

ಕಥೆ, ಚಿತ್ರಕಥೆ, ನಿರ್ದೇಶನ ಎಲ್.ಭರತ್ ಅವರದ್ದು. ಕಾಮನ್‌ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಹನೂರು ತಾಲ್ಲೂಕಿನ ಪ್ರದೀಪ್‌ ಕೌದಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಇವರೊಂದಿಗೆ ಎಚ್.ಆರ್.ವಿಶ್ವನಾಥ್, ರಾಮುಕೊಣ್ಣಾರ್ ಹಾಗೂ ಮಣಿಕಡಕೊಳ ಅವರು ಚಿತ್ರದ ಸಹ ನಿರ್ಮಾಪಕರು.

ಚಿತ್ರವು ರಾಜಕೀಯ ಮತ್ತು ವಿಜ್ಞಾನ ವಿಷಯ ಆಧರಿಸಿದ ಕಥಾಹಂದರವನ್ನು ಹೊಂದಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ನಡೆಯುವ ಕಥೆಯಿದು. ಹೈಪರ್‌ಟೈಮಿಸಿಯಾ ಕಾಯಿಲೆ ಇರುವ ಹುಡುಗಿಯು ಒಂದು ಸಲ ಏನನ್ನಾದರೂ ನೋಡಿದರೆ 10-20 ವರ್ಷಗಳ ಕಾಲ ನೆನಪಿನಲ್ಲಿಡುವ ಇರುವ ಶಕ್ತಿ ಹೊಂದಿರುತ್ತಾಳೆ. ಇದನ್ನು ಅರಿತುಕೊಂಡ ಪ್ರಭಾವಿ ರಾಜಕಾರಣಿಗಳು ಆಕೆಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ ಅವಳ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಕಥೆ.

‘ಉಗ್ರಂ’ ಖ್ಯಾತಿಯ ತಿಲಕ್ ನಾಯಕ. ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಟಿಸಿದ್ದ ಆಸಿಯಾ ಫಿರ್ದೋಸಿ ಹಾಗೂ ನಯನಾ ನಾಯಕಿಯರು. ಶೋಭರಾಜ್, ದಿನೇಶ್‌ ಮಂಗಳೂರು, ಎಚ್.ಎಂ.ಟಿ.ವಿಜಯ್, ರಘುರಮಣಕೊಪ್ಪ, ಅನಿತಾಭಟ್, ಬಲರಾಜವಾಡಿ, ಮಿಮಿಕ್ರಿಗೋಪಿ, ವರುಣ್‌ಕೃಷ್ಣ ನಟಿಸುತ್ತಿದ್ದಾರೆ.

ಪ್ರತಾಪ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ-ಸಂಕಲನ ಋಷಿಕೇಶ್, ಸಾಹಸ ಜಾನಿ ಮಾಸ್ಟರ್ ಅವರದ್ದು. ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ, ಬೆಂಗಳೂರು, ತುಮಕೂರು, ಕನಕಪುರ ಕಡೆಗಳಲ್ಲಿ ಶೇಕಡ 95ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT