ತಾರಾರಗಣದಲ್ಲಿ ಮುರಳಿ ವಿ., ಮಂಜು, ಉತ್ತಮ್, ಸುಶಾಂತ್, ಚೈತನ್ಯ, ಅನಿಲ್, ರಂಜಿತಾ, ರಮ್ಯಾ, ನಿತ್ಯಾ, ತನುಶ್ರೀ ದತ್ತ, ಬೇಬಿ ಕಾರುಣ್ಯ ಇದ್ದಾರೆ. ಸಂಗೀತ ಆರೋನ್ ಕಾರ್ತಿಕ್ ವೆಂಕಟೇಶ್, ಛಾಯಾಗ್ರಹಣ ನರೇಹಳ್ಳಿ ರಾಮು, ಸಂಕಲನ ಪ್ರವೀಣ್-ನಾಗರಾಜ ಡಿ.ಹೊಳ್ಳ ಅವರದ್ದು. ಬೆಂಗಳೂರು, ತಲಕಾಡು, ರಾಮನಗರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಪ್ರಚಾರ ಕಲೆ ಮತ್ತು ಕೆಲವು ತಾಂತ್ರಿಕ ಸಲಹೆಗಳನ್ನು ಡಾ.ಓಂ ಸತೀಶ್ ನಿರ್ವಹಿಸಿದ್ದಾರೆ. ಚಿತ್ರವನ್ನು ಆದಷ್ಟು ಬೇಗನೆ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.