ದರ್ಶನ್ ನಟನೆಯ ಬಹುನಿರೀಕ್ಷಿತ ‘ಒಡೆಯ’ ಚಿತ್ರದ ಎರಡು ಹಾಡುಗಳ ಚಿತ್ರೀಕರಣವು ಹತ್ತು ದಿನಗಳ ಕಾಲ ಸ್ವಿಡ್ಜರ್ಲೆಂಡ್ನಲ್ಲಿ ನಡೆದಿದೆ.
ದರ್ಶನ್ ಮತ್ತು ರಾಘವಿ ತಿಮ್ಮಯ್ಯ ಅಭಿನಯಿಸಿದ ಈ ಹಾಡುಗಳನ್ನು ಜಿಮಿಜಿಪ್ ಹಾಗೂ ಎರಡು ಕ್ಯಾಮೆರಾ ಬಳಸಿ ಅದ್ದೂರಿಯಾಗಿ ಚಿತ್ರಿಸಿಕೊಳ್ಳಲಾಗಿದೆ. ಈ ಹಾಡುಗಳಿಗೆ ನೃತ್ಯ ಸಂಯೋಜಿಸಿರುವುದು ಕಲೈ. ಸುಮಾರು ಐವತ್ತು ಜನರ ತಂಡ ಸಾಂಗ್ಗಳ ಶೂಟಿಂಗ್ಗಾಗಿಸ್ವಿಡ್ಜರ್ಲೆಂಡ್ಗೆ ತೆರಳಿತ್ತು. ಈಗ ಹಾಡುಗಳ ಚಿತ್ರೀಕರಣದೊಂದಿಗೆ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಎಂ.ಡಿ. ಶ್ರೀಧರ್. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ.
ಕೆ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ವಿಜಯ್ ಅವರು ಸಾಹಸ ಸಂಯೋಜಿಸಿದ್ದಾರೆ. ಸಂಭಾಷಣೆ ಹೊಸೆದಿರುವುದು ಪ್ರಶಾಂತ್ ರಾಚಪ್ಪ. ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ತಾರಾಗಣದಲ್ಲಿದ್ದಾರೆ.ಸಂದೇಶ್ ಪ್ರೊಡಕ್ಷನ್ ಲಾಂಛನದಡಿ ಎನ್. ಸಂದೇಶ್ ಬಂಡವಾಳ ಹೂಡಿದ್ದಾರೆ.