ಪವನ್ ಕಲ್ಯಾಣ್ ಹಾಗೂ ಹರೀಶ್ ಶಂಕರ್ ಅವರು ಈ ಹಿಂದೆಯೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹರೀಶ್ ನಿರ್ದೇಶನದ ‘ಗಬ್ಬರ್ ಸಿಂಗ್’ ಸಿನಿಮಾವು ಪವನ್ ಕಲ್ಯಾಣ್ ನಟನಾ ಜೀವನಕ್ಕೆ ಭಾರಿ ಬ್ರೇಕ್ ನೀಡಿದ ಚಿತ್ರ. ಒಂದು ವೇಳೆ ಈಗ ಹೊಸ ಸಿನಿಮಾವನ್ನು ಈ ಜೋಡಿ ಮಾಡಿದರೆ ಮತ್ತೊಂದು ಬಿಗ್ ಹಿಟ್ ಸಿಗಲಿದೆ ಎಂಬ ನಿರೀಕ್ಷೆ ಇದೆ. ಹಾಗೆಯೇ ಕೃಶ್ ಅವರ ಚಿತ್ರಕತೆಯೂ ಪವನ್ ಕಲ್ಯಾಣ್ಗೆ ಇಷ್ಟವಾಗಿದೆ. ಎಲ್ಲಾ ವಯಸ್ಸಿನವರು ನೋಡುವಂತಹ, ಸಾಮಾಜಿಕ ಸಂದೇಶವಿರುವ ಚಿತ್ರದ ಮೂಲಕ ಟಾಲಿವುಡ್ಗೆ ವಾಪಸ್ಸಾಗಲು ಪವನ್ ಯೋಚಿಸುತ್ತಿದ್ದಾರಂತೆ. ಅವರು ಸಿನಿಮಾ ಹಾಗೂ ರಾಜಕೀಯವನ್ನು ಸಮತೋಲನ ಮಾಡಿಕೊಂಡು ಮುಂದುವರಿಯಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯಕ್ಕೆ ರಾಜಕೀಯದಿಂದ ದೂರವಾಗುವ ಯಾವುದೇ ಯೋಜನೆಗಳು ಅವರಿಗಿಲ್ಲ. ರಾಜಕೀಯದಲ್ಲಿ ಇದ್ದು, ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುವ ಉತ್ಸಾಹ ಅವರದು.