8 ನಿಮಿಷದ ದೃಶ್ಯಕ್ಕೆ ಕತ್ತರಿ: ‘ಸಿನಿಮಾ ಮಾಡುವುದು ಜನರಿಗಾಗಿ. ಕೆಲ ದೃಶ್ಯಗಳ ಕುರಿತು ಇದ್ದ ವಿವಾದವನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ. ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿದ್ದರೆ, ನಾವು ತೆಗೆಯುತ್ತಿದ್ದೆವು. ಸೆನ್ಸಾರ್ ಆಗಿದೆ. ಹೀಗಾಗಿ ನೀವೇನೂ ಹೇಳುವಂತಿಲ್ಲ ಎಂದು ನಾವು ದೃಶ್ಯಗಳನ್ನು ವಿರೋಧಿಸಿದವರಿಗೆ ಹೇಳಿಲ್ಲ. ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದು ಉದ್ದೇಶಪೂರ್ವಕವಲ್ಲ. ತಪ್ಪಿನಲ್ಲಿ ನನ್ನ ಜವಾಬ್ದಾರಿಯೂ ಇದೆ. ತಪ್ಪನ್ನು ತಿದ್ದಿಕೊಂಡಿದ್ದೇವೆ. ಯಾರಿಗಾದರೂ ಬೇಜಾರಾಗಿದ್ದಲ್ಲಿ, ನಿಮ್ಮ ಮನೆ ಮಗ ತಪ್ಪು ಮಾಡಿದ್ದಾನೆ, ದಯವಿಟ್ಟು ಕ್ಷಮಿಸಿ’ ಎಂದು ಧ್ರುವ ಸರ್ಜಾ ಹೇಳಿದರು.