‘ಗಂಗೂಬಾಯಿ ಕಾಠೇವಾಡಿ’ ಚಿತ್ರದ ನಾಯಕಿ ಆಲಿಯಾ ಭಟ್ ವಿರುದ್ಧ ಪ್ರತಿರೋಧದ ‘ಕೆಂಪು’ದೀಪ ಬೆಳಗಿದೆ. ವಿಷಯ ಇಷ್ಟೆ, ಚಿತ್ರದಲ್ಲಿ ಗಂಗೂಬಾಯಿ ಪಾತ್ರದ ಕಥಾ ಸನ್ನಿವೇಶ ಮುಂಬೈನ ಕಾಮಾಟಿಪುರದ ಸುತ್ತ ಸುತ್ತಿಕೊಂಡಿದೆ. ಆದರೆ, ಅದು ಅಲ್ಲಿನ ಜನಜೀವನವನ್ನು ಸರಿಯಾಗಿ ಬಿಂಬಿಸಿಲ್ಲ. ಬದಲಾಗಿ ಕೆಂಪುದೀಪ ಪ್ರದೇಶ ಎಂದೇ ಬಿಂಬಿಸಿದೆ ಎಂಬುದು ಈ ಆಕ್ಷೇಪಕ್ಕೆ ಕಾರಣ. ಆಲಿಯಾ ಭಟ್ ಚಿತ್ರದಲ್ಲಿ ವೇಶ್ಯಾವಾಟಿಕೆ ಪ್ರದೇಶದ ‘ಮೇಡಂ’ (ನಾಯಕಿ) ಆಗಿ ಅಭಿನಯಿಸುತ್ತಿದ್ದಾರೆ.