<p><strong>ಬೆಂಗಳೂರು</strong>: ದೊಡ್ಮನೆ ಮಗ, ಅಭಿಮಾನಿಗಳ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಆಗಲಿದ್ದರೂ, ಅವರ ನೆನಪುಗಳು ಸದಾ ಸ್ಮರಣೀಯ. ಅವರ ಅಭಿಮಾನಿಗಳಂತೂ ಅವರನ್ನು ಆರಾಧ್ಯ ದೇವರಂತೆ ಪೂಜಿಸುತ್ತ ಧ್ಯಾನಿಸುತ್ತಿದ್ದಾರೆ. </p><p>ಈ ನಡುವೆಯೇ ಅಪ್ಪು ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರವಾಗುವಂತ ಹಾಡೊಂದನ್ನು ಪಿಆರ್ಕೆ ಸ್ಟುಡಿಯೋ ಹೊರತಂದಿದೆ. ಈ ಹಾಡು ಪುನೀತ್ ಅವರ ಬಾಲ್ಯದ ನೆನಪುಗಳಿಂದ ಹಿಡಿದು ವೃತ್ತಿ ಜೀವನದವರೆಗಿನ ಸನ್ನಿವೇಶಗಳ ಕುರಿತು ಸಂಗೀತ ಸಂಯೋಜನೆ ಮಾಡಲಾಗಿದ್ದು ಕೇಳುಗರ ಮನಸ್ಸಿಗೆ ಅಪ್ಪು ಅಮರ ಎನ್ನಿಸುವಂತಿದೆ.</p><p>'ಕೋಟಿ ಕನ್ನಡ ಉಸಿರ ಅಧಿಕಾರಿ ನೀನೆ, ನೀನೆ.. ನೀನೆ.. ರಾಜಕುಮಾರ ಎಂಬ ಸಾಲುಗಳ ಮೂಲಕ ಆರಂಭವಾಗುವ ಹಾಡು ಅಪ್ಪು ಜೀವಂತಕ್ಕೆ ಸಾಕ್ಷಿಯಾಗಿದೆ. ಸರಳ ವ್ಯಕ್ತಿತ್ವ, ಅಭಿಮಾನಿಗಳ ಬಗ್ಗೆ ಹೊಂದಿದ್ದ ಕಾಳಜಿ, ಸಿನಿ ಬದುಕಿನ ಉತ್ಸಾಹ, ಮಾನವೀಯತೆಯ ಪ್ರತಿರೂಪದ ವಿವರಿಸಿರುವ ಸಾಲುಗಳು ಹಾಡಿನಲ್ಲಿದೆ.</p><p>ಈ ಹಾಡಿಗೆ ಪವನ್ ಭಟ್ ಸಾಹಿತ್ಯವಿದ್ದು, ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ಸುನಿಲ್ ಕೋಶಿ ಮಾಡಿದ್ದಾರೆ. ಈ ಹಾಡನ್ನು ಜಂಕಾರ್ ಮ್ಯೂಸಿಕ್ ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದು, ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೊಡ್ಮನೆ ಮಗ, ಅಭಿಮಾನಿಗಳ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಆಗಲಿದ್ದರೂ, ಅವರ ನೆನಪುಗಳು ಸದಾ ಸ್ಮರಣೀಯ. ಅವರ ಅಭಿಮಾನಿಗಳಂತೂ ಅವರನ್ನು ಆರಾಧ್ಯ ದೇವರಂತೆ ಪೂಜಿಸುತ್ತ ಧ್ಯಾನಿಸುತ್ತಿದ್ದಾರೆ. </p><p>ಈ ನಡುವೆಯೇ ಅಪ್ಪು ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರವಾಗುವಂತ ಹಾಡೊಂದನ್ನು ಪಿಆರ್ಕೆ ಸ್ಟುಡಿಯೋ ಹೊರತಂದಿದೆ. ಈ ಹಾಡು ಪುನೀತ್ ಅವರ ಬಾಲ್ಯದ ನೆನಪುಗಳಿಂದ ಹಿಡಿದು ವೃತ್ತಿ ಜೀವನದವರೆಗಿನ ಸನ್ನಿವೇಶಗಳ ಕುರಿತು ಸಂಗೀತ ಸಂಯೋಜನೆ ಮಾಡಲಾಗಿದ್ದು ಕೇಳುಗರ ಮನಸ್ಸಿಗೆ ಅಪ್ಪು ಅಮರ ಎನ್ನಿಸುವಂತಿದೆ.</p><p>'ಕೋಟಿ ಕನ್ನಡ ಉಸಿರ ಅಧಿಕಾರಿ ನೀನೆ, ನೀನೆ.. ನೀನೆ.. ರಾಜಕುಮಾರ ಎಂಬ ಸಾಲುಗಳ ಮೂಲಕ ಆರಂಭವಾಗುವ ಹಾಡು ಅಪ್ಪು ಜೀವಂತಕ್ಕೆ ಸಾಕ್ಷಿಯಾಗಿದೆ. ಸರಳ ವ್ಯಕ್ತಿತ್ವ, ಅಭಿಮಾನಿಗಳ ಬಗ್ಗೆ ಹೊಂದಿದ್ದ ಕಾಳಜಿ, ಸಿನಿ ಬದುಕಿನ ಉತ್ಸಾಹ, ಮಾನವೀಯತೆಯ ಪ್ರತಿರೂಪದ ವಿವರಿಸಿರುವ ಸಾಲುಗಳು ಹಾಡಿನಲ್ಲಿದೆ.</p><p>ಈ ಹಾಡಿಗೆ ಪವನ್ ಭಟ್ ಸಾಹಿತ್ಯವಿದ್ದು, ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ಸುನಿಲ್ ಕೋಶಿ ಮಾಡಿದ್ದಾರೆ. ಈ ಹಾಡನ್ನು ಜಂಕಾರ್ ಮ್ಯೂಸಿಕ್ ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದು, ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>