<p>‘ನಾನು ಕನ್ನಡ ಚಿತ್ರರಂಗದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದೇನೆ. ನನ್ನ ಅಭಿಮಾನಿಗಳ ಪ್ರೀತಿಯೇ ಇದಕ್ಕೆ ಕಾರಣ’ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.</p>.<p>ಬೆಂಗಳೂರಿನಲ್ಲಿ ನಡೆದ ನವರಸನ್ ನಿರ್ದೇಶನದ ‘ದಮಯಂತಿ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್ನಲ್ಲಿ ‘ದಮಯಂತಿ’ ಚಿತ್ರ ವಿಶೇಷವಾದುದು. ಈ ಸಿನಿಮಾದ ಕಥೆ, ಪಾತ್ರದ ಬಗ್ಗೆ ಹೇಳಿದಾಗ ನನಗೆ ನಿಜಕ್ಕೂ ಭಯವಾಯಿತು. ಇಂತಹ ಪಾತ್ರಕ್ಕೆ ನಾನು ಜೀವ ತುಂಬಲು ಸಾಧ್ಯವೇ ಎಂಬ ಅಳುಕು ಕಾಡುತ್ತಿತ್ತು. ಆದರೆ, ನನ್ನ ಮನಸ್ಸಿನ ಮೂಲೆಯಲ್ಲಿ ಇಂತಹ ಪಾತ್ರ ಮಾಡಬೇಕೆಂಬ ಆಸೆಯೂ ಇತ್ತು. ಅದು ಈ ದಮಯಂತಿಯ ಮೂಲಕ ಈಡೇರಿಸಿದೆ’ ಎಂದು ಖುಷಿ ಹಂಚಿಕೊಂಡರು.</p>.<p>‘ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಇದಕ್ಕೆ ಚಿತ್ರತಂಡ ಪರಿಶ್ರಮವೇ ಕಾರಣ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಆಡಿಯೊ ಬಿಡುಗಡೆ ಮಾಡಿರುವುದು ಖುಷಿ ನೀಡಿದೆ. ಆ ಮೂಲಕ ‘ಡಿಬಾಸ್’ ನನ್ನ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್ ನೀಡಿದ್ದಾರೆ. ನಾನು ಅವರೊಟ್ಟಿಗೆ ‘ಅನಾಥರು’ ಮತ್ತು ’ಮಂಡ್ಯ’ ಚಿತ್ರದಲ್ಲಿ ನಟಿಸಿದ್ದೇನೆ. ಹಲವು ವರ್ಷದ ಬಳಿಕ ಅವರೊಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಖುಷಿ ನೀಡಿದೆ’ ಎಂದರು.</p>.<p class="Briefhead"><strong>ನನಗಿಂತಲೂ ರಾಧಿಕಾ ಸೀನಿಯರ್ ಎಂದ ದರ್ಶನ್</strong></p>.<p>‘ರಾಧಿಕಾ ಅವರು ನನ್ನ ಸೀನಿಯರ್. ನನಗಿಂತಲೂ ಮೊದಲೇ ಅವರು ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಅವರು ‘ನೀಲ ಮೇಘ ಶ್ಯಾಮ’ ಚಿತ್ರ ಮಾಡಿದ ಬಳಿಕ ನಾನು ‘ಮೆಜೆಸ್ಟಿಕ್’ ಸಿನಿಮಾ ಮಾಡಿದೆ ಎಂದು ಹೇಳಿದರು ದರ್ಶನ್.</p>.<p>‘ದಮಯಂತಿ’ ಚಿತ್ರದ ಟ್ರೇಲರ್ ನೋಡಿದೆ. ಇಂತಹ ಪಾತ್ರ ಮಾಡಲು ಗಟ್ಟಿಯಾದ ಪ್ರತಿಭೆ ಇರಬೇಕು. ಅವರೊಟ್ಟಿಗೆ ಚಿತ್ರರಂಗ ಪ್ರವೇಶಿಸಿದ ಹಲವು ನಟಿಯರು ಈಗ ನಟಿಸುತ್ತಿಲ್ಲ. ಆದರೆ, ರಾಧಿಕಾ ಅವರು ಇಂದಿಗೂ ಚಿತ್ರರಂಗದಲ್ಲಿ ಇದ್ದಾರೆ ಎಂದರೆ ಅವರಲ್ಲಿನ ಪ್ರತಿಭೆಯೇ ಇದಕ್ಕೆ ಸಾಕ್ಷಿ’ ಎಂದು ಹೊಗಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಾನು ಕನ್ನಡ ಚಿತ್ರರಂಗದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದೇನೆ. ನನ್ನ ಅಭಿಮಾನಿಗಳ ಪ್ರೀತಿಯೇ ಇದಕ್ಕೆ ಕಾರಣ’ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.</p>.<p>ಬೆಂಗಳೂರಿನಲ್ಲಿ ನಡೆದ ನವರಸನ್ ನಿರ್ದೇಶನದ ‘ದಮಯಂತಿ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್ನಲ್ಲಿ ‘ದಮಯಂತಿ’ ಚಿತ್ರ ವಿಶೇಷವಾದುದು. ಈ ಸಿನಿಮಾದ ಕಥೆ, ಪಾತ್ರದ ಬಗ್ಗೆ ಹೇಳಿದಾಗ ನನಗೆ ನಿಜಕ್ಕೂ ಭಯವಾಯಿತು. ಇಂತಹ ಪಾತ್ರಕ್ಕೆ ನಾನು ಜೀವ ತುಂಬಲು ಸಾಧ್ಯವೇ ಎಂಬ ಅಳುಕು ಕಾಡುತ್ತಿತ್ತು. ಆದರೆ, ನನ್ನ ಮನಸ್ಸಿನ ಮೂಲೆಯಲ್ಲಿ ಇಂತಹ ಪಾತ್ರ ಮಾಡಬೇಕೆಂಬ ಆಸೆಯೂ ಇತ್ತು. ಅದು ಈ ದಮಯಂತಿಯ ಮೂಲಕ ಈಡೇರಿಸಿದೆ’ ಎಂದು ಖುಷಿ ಹಂಚಿಕೊಂಡರು.</p>.<p>‘ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಇದಕ್ಕೆ ಚಿತ್ರತಂಡ ಪರಿಶ್ರಮವೇ ಕಾರಣ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಆಡಿಯೊ ಬಿಡುಗಡೆ ಮಾಡಿರುವುದು ಖುಷಿ ನೀಡಿದೆ. ಆ ಮೂಲಕ ‘ಡಿಬಾಸ್’ ನನ್ನ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್ ನೀಡಿದ್ದಾರೆ. ನಾನು ಅವರೊಟ್ಟಿಗೆ ‘ಅನಾಥರು’ ಮತ್ತು ’ಮಂಡ್ಯ’ ಚಿತ್ರದಲ್ಲಿ ನಟಿಸಿದ್ದೇನೆ. ಹಲವು ವರ್ಷದ ಬಳಿಕ ಅವರೊಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಖುಷಿ ನೀಡಿದೆ’ ಎಂದರು.</p>.<p class="Briefhead"><strong>ನನಗಿಂತಲೂ ರಾಧಿಕಾ ಸೀನಿಯರ್ ಎಂದ ದರ್ಶನ್</strong></p>.<p>‘ರಾಧಿಕಾ ಅವರು ನನ್ನ ಸೀನಿಯರ್. ನನಗಿಂತಲೂ ಮೊದಲೇ ಅವರು ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಅವರು ‘ನೀಲ ಮೇಘ ಶ್ಯಾಮ’ ಚಿತ್ರ ಮಾಡಿದ ಬಳಿಕ ನಾನು ‘ಮೆಜೆಸ್ಟಿಕ್’ ಸಿನಿಮಾ ಮಾಡಿದೆ ಎಂದು ಹೇಳಿದರು ದರ್ಶನ್.</p>.<p>‘ದಮಯಂತಿ’ ಚಿತ್ರದ ಟ್ರೇಲರ್ ನೋಡಿದೆ. ಇಂತಹ ಪಾತ್ರ ಮಾಡಲು ಗಟ್ಟಿಯಾದ ಪ್ರತಿಭೆ ಇರಬೇಕು. ಅವರೊಟ್ಟಿಗೆ ಚಿತ್ರರಂಗ ಪ್ರವೇಶಿಸಿದ ಹಲವು ನಟಿಯರು ಈಗ ನಟಿಸುತ್ತಿಲ್ಲ. ಆದರೆ, ರಾಧಿಕಾ ಅವರು ಇಂದಿಗೂ ಚಿತ್ರರಂಗದಲ್ಲಿ ಇದ್ದಾರೆ ಎಂದರೆ ಅವರಲ್ಲಿನ ಪ್ರತಿಭೆಯೇ ಇದಕ್ಕೆ ಸಾಕ್ಷಿ’ ಎಂದು ಹೊಗಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>