ಬೆಂಗಳೂರಿನಲ್ಲಿ ನಡೆದ ನವರಸನ್ ನಿರ್ದೇಶನದ ‘ದಮಯಂತಿ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್ನಲ್ಲಿ ‘ದಮಯಂತಿ’ ಚಿತ್ರ ವಿಶೇಷವಾದುದು. ಈ ಸಿನಿಮಾದ ಕಥೆ, ಪಾತ್ರದ ಬಗ್ಗೆ ಹೇಳಿದಾಗ ನನಗೆ ನಿಜಕ್ಕೂ ಭಯವಾಯಿತು. ಇಂತಹ ಪಾತ್ರಕ್ಕೆ ನಾನು ಜೀವ ತುಂಬಲು ಸಾಧ್ಯವೇ ಎಂಬ ಅಳುಕು ಕಾಡುತ್ತಿತ್ತು. ಆದರೆ, ನನ್ನ ಮನಸ್ಸಿನ ಮೂಲೆಯಲ್ಲಿ ಇಂತಹ ಪಾತ್ರ ಮಾಡಬೇಕೆಂಬ ಆಸೆಯೂ ಇತ್ತು. ಅದು ಈ ದಮಯಂತಿಯ ಮೂಲಕ ಈಡೇರಿಸಿದೆ’ ಎಂದು ಖುಷಿ ಹಂಚಿಕೊಂಡರು.