<p>‘ಧ್ರುವ 369’ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ರಾಜ್ಯಪಾಲರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣವು ನಂದಿಬೆಟ್ಟ ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.</p>.<p>ನಿರ್ದೇಶಕ ಶಂಕರ್ನಾಗ್ ಪ್ರಕಾರ, ‘ರಾಘವೇಂದ್ರ ರಾಜ್ಕುಮಾರ್ ಅವರು ಕಥೆಯ ಪ್ರಾರಂಭ, ಮಧ್ಯಂತರ ಹಾಗೂ ಕ್ಲೈಮ್ಯಾಕ್ಸ್ನಲ್ಲಿ ಇರುತ್ತಾರೆ. ಪುರಾಣ ಕಾಲದ ಧ್ರುವ ನಕ್ಷತ್ರ ಕಥೆಗೂ ಈಗಿನ ಖಗೋಳಶಾಸ್ತ್ರಕ್ಕೂ ಸಂಬಂಧವಿರುವ ಕಥೆಯಿದೆ. ಅಲ್ಲದೆ ಕುತೂಹಲಕಾರಿ ಅಂಶ ಅಡಗಿದೆ. ಮುಖ್ಯ ಪಾತ್ರದಲ್ಲಿ ರಮೇಶ್ ಭಟ್, ಅತೀಶ್ ಶೆಟ್ಟಿ, ಚಂದನಾ, ನಮಿತಾ, ಸಂದೀಪ್ ಮಲಾನಿ, ಅರುಣ್ ಸಾಗರ್, ಮೇಘಾ ಗೌಡ, ಭಾಸ್ಕರ್ ಮಣಿಪಾಲ ಹಾಗೂ ಮಂಗಳೂರಿನ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ನಾನು ಸಹ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದು ಮಾಹಿತಿ ನೀಡಿದರು.</p>.<p>ಶ್ರೀಕೃಷ್ಣ ಕಾಂತಿಲ ಅವರು ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ಬಾಬು ಸಂಗೀತ ನಿರ್ದೇಶನ, ಮಹಾಬಲ ಛಾಯಾಗ್ರಹಣ, ಸುಬ್ರಹ್ಮಣ್ಯ ಐರೋಡಿ ಸಂಕಲನ ಚಿತ್ರಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಧ್ರುವ 369’ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ರಾಜ್ಯಪಾಲರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣವು ನಂದಿಬೆಟ್ಟ ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.</p>.<p>ನಿರ್ದೇಶಕ ಶಂಕರ್ನಾಗ್ ಪ್ರಕಾರ, ‘ರಾಘವೇಂದ್ರ ರಾಜ್ಕುಮಾರ್ ಅವರು ಕಥೆಯ ಪ್ರಾರಂಭ, ಮಧ್ಯಂತರ ಹಾಗೂ ಕ್ಲೈಮ್ಯಾಕ್ಸ್ನಲ್ಲಿ ಇರುತ್ತಾರೆ. ಪುರಾಣ ಕಾಲದ ಧ್ರುವ ನಕ್ಷತ್ರ ಕಥೆಗೂ ಈಗಿನ ಖಗೋಳಶಾಸ್ತ್ರಕ್ಕೂ ಸಂಬಂಧವಿರುವ ಕಥೆಯಿದೆ. ಅಲ್ಲದೆ ಕುತೂಹಲಕಾರಿ ಅಂಶ ಅಡಗಿದೆ. ಮುಖ್ಯ ಪಾತ್ರದಲ್ಲಿ ರಮೇಶ್ ಭಟ್, ಅತೀಶ್ ಶೆಟ್ಟಿ, ಚಂದನಾ, ನಮಿತಾ, ಸಂದೀಪ್ ಮಲಾನಿ, ಅರುಣ್ ಸಾಗರ್, ಮೇಘಾ ಗೌಡ, ಭಾಸ್ಕರ್ ಮಣಿಪಾಲ ಹಾಗೂ ಮಂಗಳೂರಿನ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ನಾನು ಸಹ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದು ಮಾಹಿತಿ ನೀಡಿದರು.</p>.<p>ಶ್ರೀಕೃಷ್ಣ ಕಾಂತಿಲ ಅವರು ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್ಬಾಬು ಸಂಗೀತ ನಿರ್ದೇಶನ, ಮಹಾಬಲ ಛಾಯಾಗ್ರಹಣ, ಸುಬ್ರಹ್ಮಣ್ಯ ಐರೋಡಿ ಸಂಕಲನ ಚಿತ್ರಕ್ಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>