ಬೆಂಗಳೂರು:ಏಪ್ರಿಲ್ 24 ವರನಟ ರಾಜ್ಕುಮಾರ್ ಹುಟ್ಟುಹಬ್ಬ. ಈ ಪ್ರಯುಕ್ತ 'ಅಪ್ಪಾಜಿಯ ನೆನಪು' ಎಂಬ ದನಿ ಸರಣಿಯನ್ನು ರಾಘವೇಂದ್ರ ರಾಜ್ಕುಮಾರ್ ತಮ್ಮ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ.
ರಾಜ್ಕುಮಾರ್ ನೆನಪಿನ ಸರಮಾಲೆ ಇದಾಗಿದ್ದು ಅಪ್ಪಾಜಿಯ ನೆನಪು- ಭಾಗ 1 ಏಪ್ರಿಲ್ 12ರಂದು ಅಪ್ಲೋಡ್ ಆಗಿದೆ.ಈ ಭಾಗದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ರಾಜ್ಕುಮಾರ್ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
ಎರಡನೇ ಭಾಗದಲ್ಲಿ ಚಿ.ಉದಯಶಂಕರ್ ಅವರಿಗೆ ಡಾ.ರಾಜ್ ನೀಡಿದ ಸಂದರ್ಶನ ಅಪ್ಲೋಡ್ ಮಾಡಿದ್ದು, ಮೂರನೇ ಭಾಗದಲ್ಲಿ ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 2003ನೇ ಸಾಲಿನ 'ವಾಟಿಕಾ ವರ್ಷದ ಕನ್ನಡಿಗ' ಪ್ರಶಸ್ತಿಯನ್ನು ಪಡೆದು ರಾಜ್ಕುಮಾರ್ ಅವರು ಅಭಿಮಾನಿ ದೇವರುಗಳನ್ನುದ್ದೇಶಿಸಿ ಮಾತನಾಡಿದ ಭಾಷಣವಿದೆ.