ವಿಧೇಯತೆ, ಪರೋಪಕಾರ, ವಿದ್ಯೆ, ದೈವಭಕ್ತಿ, ಶ್ರಮಜೀವಿ ಮತ್ತು ಧೈರ್ಯದಲ್ಲಿ ಈ ಮಾಧವ ಶೇಕಡಾವಾರು ಅಂಕಗಳಿಸಿದ್ದಾನೆ. ಆದರೆ, ಅದೃಷ್ಟದಲ್ಲಿ ಈತನದ್ದು ಶೂನ್ಯ ಸಂಪಾದನೆ. ಹಳೆಯ ಬಜಾಜ್ ಬೈಕ್ನಲ್ಲಿ ಹೊರಟ ಮಾಧವ ಅಲಿಯಾಸ್ ರವಿಶಂಕರ್ ಅವರ ಪೋಸ್ಟರ್ ಸುತ್ತಲೂ ಈ ಅಂಶಗಳತ್ತ ಬಾಣ ನೆಟ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ಪ್ರೀತಂ ಶೆಟ್ಟಿ.