ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಜನಪಕ್ಷಪಾತ ಆರೋಪಕ್ಕೆ ಹೆದರಿದ ಸಲ್ಮಾನ್ ಖಾನ್ ಮೈದುನ

Last Updated 18 ನವೆಂಬರ್ 2021, 5:53 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದ ಸ್ವಜನಪಕ್ಷಪಾತ ಆರೋಪ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ.

ನಟ ಸಲ್ಮಾನ್ ಖಾನ್ ಅವರ ಮೈದುನ ಆಯುಷ್ ಶರ್ಮಾ ಕೂಡ ಚಿತ್ರರಂಗದಲ್ಲಿ ಇದೇ ಅನುಭವ ಎದುರಿಸಿದ್ದಾರೆ.

ಸ್ವಜನಪಕ್ಷಪಾತದ ಆರೋಪ ಬರಬಹುದು ಎಂಬ ಕಾರಣದಿಂದ ಆಯುಷ್ ಶರ್ಮಾ, ಸಲ್ಮಾನ್ ಜತೆ ಕೆಲಸ ಮಾಡಲು ಇಷ್ಟವಿಲ್ಲ. ಅದರಿಂದ ನನ್ನ ಮೇಲೆ ಕೂಡ ಜನರು ಆಪಾದನೆ ಹೊರಿಸಬಹುದು ಮತ್ತು ಸಲ್ಮಾನ್ ಖಾನ್ ಅವರಿಗೂ ಇದು ಸಮಸ್ಯೆಯಾಗಬಹುದು ಎಂದುಕೊಂಡಿದ್ದೇನೆ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಲ್ಮಾನ್ ಅವರ ಕುಟುಂಬದ ಹಿನ್ನಲೆಯಿರುವ ನನಗೆ ಅವರು ಚಿತ್ರರಂಗದಲ್ಲಿ ಸಹಾಯ ಮಾಡಲು ಸಿನಿಮಾ ಮಾಡುತ್ತಿದ್ದಾರೆ ಮತ್ತು ಪಾತ್ರಗಳನ್ನು ನೀಡುತ್ತಿದ್ದಾರೆ ಎಂದು ಜನರು ಯೋಚಿಸಬಹುದು. ಅಂತಹ ಆರೋಪ ಬರಬಾರದು ಎನ್ನುವುದು ನನ್ನ ಅಭಿಪ್ರಾಯ. ಅದಕ್ಕಾಗಿ ಸಲ್ಮಾನ್ ಜತೆ ಕೆಲಸ ಮಾಡುವುದು ಇಷ್ಟವಿರಲಿಲ್ಲ ಎಂದು ಆಯುಷ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT