ಹೊಸಬರ ತಂಡವೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾವೊಂದರ ಮೂಲಕ ಪ್ರೇಕ್ಷಕರ ಎದುರಿಗೆ ಬಂದಿದೆ. ‘ಕಡಲ ತೀರದ ಭಾರ್ಗವ’ ಎಂಬ ಶೀರ್ಷಿಕೆಯ ಸಿನಿಮಾ ಇಂದು(ಮಾರ್ಚ್ 3) ತೆರೆಕಂಡಿದೆ.
ಹೀಗೆಂದ ಮಾತ್ರಕ್ಕೆ ಈ ಸಿನಿಮಾಗೂ ಶಿವರಾಮ ಕಾರಂತರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮೊದಲೇ ಸ್ಪಷ್ಟಪಡಿಸಿದೆ ಚಿತ್ರತಂಡ.
‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇವೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳ ಒಂದು ಶಕ್ತಿಶಾಲಿ ಪಾತ್ರ. ಈ ವಸ್ತುಗಳ ಮಿಶ್ರಣವೇ ‘ಕಡಲತೀರದ ಭಾರ್ಗವ’... ಹೀಗೆಂದಿದೆ ಚಿತ್ರತಂಡ.
‘ವರುಣ್ ರಾಜು ಚಿತ್ರದ ನಾಯಕರಲ್ಲಿ ಒಬ್ಬರು. ಇಲ್ಲಿ ನಾಯಕನ ಪಾತ್ರದ ಹೆಸರು ಭಾರ್ಗವ. ಪರಶುರಾಮನ ಗುಣಲಕ್ಷಣಗಳನ್ನು ಆತ ಹೊಂದಿರುತ್ತಾನೆ’ ಎಂದಿದ್ದಾರೆ ನಿರ್ದೇಶಕ ಪನ್ನಗ ಸೋಮಶೇಖರ್.
ಭರತ್ ಗೌಡ, ಶ್ರುತಿ ಪ್ರಕಾಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.