ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಬಂದ ‘ಭಾರ್ಗವ’

Last Updated 2 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಹೊಸಬರ ತಂಡವೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರದ ಸಿನಿಮಾವೊಂದರ ಮೂಲಕ ಪ್ರೇಕ್ಷಕರ ಎದುರಿಗೆ ಬಂದಿದೆ. ‘ಕಡಲ ತೀರದ ಭಾರ್ಗವ’ ಎಂಬ ಶೀರ್ಷಿಕೆಯ ಸಿನಿಮಾ ಇಂದು(ಮಾರ್ಚ್‌ 3) ತೆರೆಕಂಡಿದೆ.

ಹೀಗೆಂದ ಮಾತ್ರಕ್ಕೆ ಈ ಸಿನಿಮಾಗೂ ಶಿವರಾಮ ಕಾರಂತರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮೊದಲೇ ಸ್ಪಷ್ಟಪಡಿಸಿದೆ ಚಿತ್ರತಂಡ.

‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇವೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳ ಒಂದು ಶಕ್ತಿಶಾಲಿ ಪಾತ್ರ. ಈ ವಸ್ತುಗಳ ಮಿಶ್ರಣವೇ ‘ಕಡಲತೀರದ ಭಾರ್ಗವ’... ಹೀಗೆಂದಿದೆ ಚಿತ್ರತಂಡ.

‘ವರುಣ್ ರಾಜು ಚಿತ್ರದ ನಾಯಕರಲ್ಲಿ ಒಬ್ಬರು. ಇಲ್ಲಿ ನಾಯಕನ ಪಾತ್ರದ ಹೆಸರು ಭಾರ್ಗವ. ಪರಶುರಾಮನ ಗುಣಲಕ್ಷಣಗಳನ್ನು ಆತ ಹೊಂದಿರುತ್ತಾನೆ’ ಎಂದಿದ್ದಾರೆ ನಿರ್ದೇಶಕ ಪನ್ನಗ ಸೋಮಶೇಖರ್.

ಭರತ್ ಗೌಡ, ಶ್ರುತಿ ಪ್ರಕಾಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT