ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿಗೆ ‘ಶಿವ’ ತೆರೆಗೆ

Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಘುವಿಜಯ ಕಸ್ತೂರಿ ನಿರ್ದೇಶನದ ‘ಶಿವ’ ಚಿತ್ರವು ಫೆಬ್ರುವರಿ 21ರ ಶಿವರಾತ್ರಿ ಸಂಭ್ರಮದ ಹೊತ್ತಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ಇದರಲ್ಲಿ ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ ಇದೆ. ಹಾಗೆಯೇ, ಸ್ಥಳೀಯ ರೌಡಿಸಂ ಕುರಿತ ಕಥೆಯೂ ಇದರಲ್ಲಿದೆ’ ಎಂದು ಹೇಳುತ್ತಾರೆ ರಘುವಿಜಯ. ಅವರು ಈ ಚಿತ್ರದ ನಾಯಕ ನಟ ಕೂಡ ಹೌದು.

ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು, ಯಾವ ಮುಜುಗರವೂ ಇಲ್ಲದೆ ವೀಕ್ಷಿಸಬಹುದಾದ ಚಿತ್ರ ಇದು. ಎಲ್ಲ ವರ್ಗಗಳ ಜನರಿಗೂ ಈ ಸಿನಿಮಾ ಇಷ್ಟವಾಗುತ್ತದೆ. ಮಂಡ್ಯ ಸೊಗಡಿನ ಕನ್ನಡ ಇದರಲ್ಲಿ ಬಳಕೆಯಾಗಿದೆ ಎಂಬ ವಿವರಣೆಯನ್ನೂ ಅವರು ನೀಡುತ್ತಾರೆ.

ಧರಣಿ ಅವರು ಈ ಚಿತ್ರದ ನಾಯಕಿ. ‘ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಶುದ್ಧ ಪ್ರೀತಿಯ ಕಥೆಯೊಂದು ಈ ಚಿತ್ರದಲ್ಲಿ ಇದೆ. ನಾನು ಹೋಮ್ಲಿ ಆಗಿರುವ ಶಿಕ್ಷಕಿಯ ಪಾತ್ರ ನಿಭಾಯಿಸಿದ್ದೇನೆ’ ಎಂದು ಅವರು ತಮ್ಮ ಪಾತ್ರದ ಕುರಿತು ವಿವರಣೆ ನೀಡಿದರು. ಚಿತ್ರದ ನಿರ್ಮಾಣದ ಹೊಣೆಯನ್ನೂ ರಘುವಿಜಯ ಅವರೇ ಹೊತ್ತುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT