ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಒಂದು ಕ್ಷಣ ಶಾಕ್ ಆಯಿತು. ಬೇಸರವೂ ಆಯಿತು. ಇಂಥ ಚಿತ್ರವನ್ನು ತೆಗೆದ ಮನುಷ್ಯನೇ ಇಲ್ಲವೆಂದಾಗ ಬೇಜಾರಾಗುತ್ತಿದೆ. ಅಪ್ಪುವಿನ ಆ ಲುಕ್, ಆ ನಗು ಬಹಳ ಕಾಡುತ್ತದೆ. ಬಹಳ ನೋವಾಗುತ್ತದೆ. ಈ ಪ್ರಯತ್ನಕ್ಕೆ ಸರಿಸಾಟಿಯಿಲ್ಲ. ಗಂಧದಗುಡಿ ಎಂದರೆ ಕರುನಾಡು. ಕನ್ನಡದ ಸ್ವತ್ತು. ಗಂಧದಗುಡಿ ಮೊದಲ ಭಾಗದಲ್ಲಿ ಅಪ್ಪಾಜಿ, ಎರಡನೇ ಭಾಗದಲ್ಲಿ ನಾನು ಹಾಗೂ ಅಪ್ಪಾಜಿ, ಈಗ ಗಂಧದಗುಡಿಯಲ್ಲಿ ಅಪ್ಪು. ಹೀಗೆ ಗಂಧದಗುಡಿಗೂ ನಮ್ಮ ಕುಟುಂಬಕ್ಕೂ ಸಂಬಂಧವಿದೆ. ಇದು ಹೆಮ್ಮೆ ಎನಿಸುತ್ತದೆ. ಆದರೆ ಅಪ್ಪು ಇಲ್ಲ ಎನ್ನುವುದು ದುಃಖದ ವಿಷಯ. ಆದರೆ ನಾವು ಎಂದೂ ಅಪ್ಪು ಇಲ್ಲ ಎಂದುಕೊಂಡಿಲ್ಲ’ ಎಂದರು.