ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷಾ ಉತುಪ್‌ ಕೋಪ: ಗಾಯಕಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಟಿ.ವಿ ನಿರೂಪಕ ಶ್ರೀರಾಮ್‌

Last Updated 5 ಜೂನ್ 2022, 8:56 IST
ಅಕ್ಷರ ಗಾತ್ರ

ಹೈದರಾಬಾದ್‌: ಖ್ಯಾತ ಗಾಯಕಿ ಉಷಾ ಉತುಪ್‌ ಅವರ ದನಿಯ ಬಗ್ಗೆ ಕಾಮೆಂಟ್‌ ಮಾಡಿದ ನಿರೂಪಕ ಶ್ರೀರಾಮ್‌ ಚಂದ್ರ ವಿರುದ್ಧ ಉಷಾ ಉತುಪ್‌ ಕೋಪಗೊಂಡ ಘಟನೆ ನಡೆದಿದೆ.

ತೆಲುಗಿನ ಆಹಾ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಸಿಂಗಿಂಗ್‌ ರಿಯಾಲಿಟಿಶೋ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಅಂತಿಮವಾಗಿ ಶ್ರೀರಾಮ್‌ಚಂದ್ರ ಅವರು ಉಷಾ ಉತುಪ್‌ ಅವರ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀರಾಮ್‌ಚಂದ್ರ ಅವರು ಉಷಾ ಉತುಪ್‌ ಅವರ ಕವನ ಓದಿದ ಬಳಿಕ ನಿಮ್ಮ ದನಿ ಗಡುಸಾಗಿದೆ, ಕಿಲೋ ಮೀಟರ್‌ವರೆಗೂ ಕೇಳುತ್ತದೆ ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಉಷಾ ಉತುಪ್‌, ನನ್ನ ಧ್ವನಿ ಪುರುಷರ ದನಿಯಾಗಿದೆ ಎಂದು ನೀನುಅವಮಾನಿಸಿರುವೆ ಎಂದು ಕೋಪಗೊಂಡರು.

ನಾನು ಇಲ್ಲಿಗೆ ಬಂದದ್ದು ತಪ್ಪಾಯ್ತು ಎಂದು ಹೇಳಿಕೊಂಡರು. ಸಹ ತೀರ್ಪುಗಾರರು ಮನವೊಲಿಕೆಮಾಡಿದರೂ ಅವರ ಕೋಪ ಕಡಿಮೆಯಾಗಲಿಲ್ಲ. ಅಂತಿಮವಾಗಿ ಶ್ರೀರಾಮ್ಚಂದ್ರ ಅವರು ಉಷಾ ಉತುಪ್‌ ಅವರ ಕಾಲಿಗೆ ಬಿದ್ದು ಕ್ಷಮೆ ಕೋರಿದರು. ಈ ಹಂತದಲ್ಲಿ ಶ್ರೀರಾಮ್ ಅವರು ಭಾವುಕರಾಗಿದ್ದರು. ಅವರ ಕಣ್ಣಾಲಿಗಳು ತುಂಬಿದ್ದವು.

ಅಂತಿಮವಾಗಿ ಶ್ರೀರಾಮ್‌ ಅವರನ್ನು ಕ್ಷಮಿಸಿದ ಉಷಾ ಉತ್ತಪ್, ಕಾರ್ಯಕ್ರಮವನ್ನು ಮುಂದುವರೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT