ಬೆಂಗಳೂರು: ಲಾಕ್ಡೌನ್ ಘೋಷಣೆಯಾದ ಬಳಿಕ ದೂರದರ್ಶನದದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆಯುವುದರ ಜತೆಗೆ ದೂರದರ್ಶನ ಸಹ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನವೊಂದು ಹರಿದಾಡುತ್ತಿದೆ. ಅದೇ #ರಾಜಮೌಳಿರಾಮಾಯಣ.
ಹೌದು, ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರು ರಾಮಾಯಣ ಕುರಿತು ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂದು ಟ್ವಿಟ್ಟರ್ನಲ್ಲಿ ಟ್ರೆಂಡ್ ಸೃಷ್ಟಿಸಿ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ #Rajmoulimakeramayan ಎಂಬ ಹ್ಯಾಶ್ಟ್ಯಾಗ್ ನಿರ್ಮಾಣ ಮಾಡಲಾಗಿದೆ.
ರಾಜಮೌಳಿ ಫ್ಯಾನ್ಸ್ ಸೇರಿದಂತೆ ರಾಮಾಯಣ ಧಾರಾವಾಹಿಯ ಅಭಿಮಾನಿಗಳು ಈ ಅಭಿಯಾನಕ್ಕೆ ಜೈ ಎಂದಿದ್ದಾರೆ. ಟ್ವಿಟ್ಟರ್ನಲ್ಲಿ ರಾಜಮೌಳಿ ರಾಮಾಯಣ ಸಿನಿಮಾ ಮಾಡುವಂತೆಹಲವರು ಮನವಿ ಮಾಡಿದ್ದಾರೆ.
ಇನ್ನು ಕೆಲವರಂತೂ ಇಂತಹವರೇ ರಾಮನಾಗಬೇಕು, ಇವರೇ ಸೀತೆಯಾಗಬೇಕು ಎಂದು ಕೂಡ ಹೇಳುತ್ತಿದ್ದಾರೆ.