ಜಾಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರು ತಮ್ಮ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿ. ರಜನಿದರ್ಶನವಾದರೆ ಸಾಕು, ತಮ್ಮ ಜೀವನ ಧನ್ಯ ಎಂಬ ಮನೋಭಾವ ಅವರ ಅಭಿಮಾನಿಗಳದ್ದು. ಒಟ್ಟಿನಲ್ಲಿ, ರಜನಿಕಾಂತ್ ಮತ್ತು ಅಭಿಮಾನಗಳ ನಡುವಿನ ಸಂಬಂಧ ತುಂಬ ಅನನ್ಯವಾದದ್ದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ, ರಜನಿ ಅವರಿಗೆ ಈಗ ವಿಶಿಷ್ಟ ಅಭಿಮಾನಿಯೊಬ್ಬ ಸಿಕ್ಕಿದ್ದಾನೆ. ಕೆಲ ದಿನಗಳ ಹಿಂದೆ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿಯಾಗಿ ನೆರೆ ಪರಿಹಾರ ನೀಡಿ ಸುದ್ದಿಯಾಗಿದ್ದ ಅಂಗವಿಕಲಪ್ರಣವ್ ಎಂಬಾತನೇ ರಜನಿ ಅವರಿಗೆ ಸಿಕ್ಕಿರುವ ವಿಶಿಷ್ಟ ಅಭಿಮಾನಿ.