‘ಬಾಳೊಂದು ಚದುರಂಗ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದೆ. ಸಾಯಿಸುತೆ ಅವರ ಕಾದಂಬರಿ ಆಧರಿಸಿದ ಚಿತ್ರ ಇದು. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ದೊರೆ–ಭಗವಾನ್. ಅನಂತನಾಗ್, ಲಕ್ಷ್ಮಿ, ಅಂಬರೀಷ್, ಸುಧಾರಾಣಿ, ಸಾಯಿಕುಮಾರ್, ರಮೇಶ್ ಅರವಿಂದ್ ನಟಿಸಿದ್ದರು. ಇದರಲ್ಲಿ ನಟಿಸುವಂತೆ ಎಸ್ಪಿಬಿ ಅವರಿಗೂ ಕೋರಿದೆ. ಮೊದಲಿಗೆ ಅವರು ಒಪ್ಪಿಕೊಳ್ಳಲಿಲ್ಲ. ಕೊನೆಗೆ, ಅಭಿನಯಿಸಲು ಒಪ್ಪಿದರು. ಸಮಯಕ್ಕೆ ಸರಿಯಾಗಿ ಶೂಟಿಂಗ್ ಸೆಟ್ಗೆ ಹಾಜರಾಗುತ್ತಿದ್ದರು. ನಾನೊಬ್ಬ ದೊಡ್ಡ ಗಾಯಕ ಎಂಬ ಭ್ರಮೆ ಅವರಿಗೆ ಇರಲಿಲ್ಲ. ಸೆಟ್ನಲ್ಲಿ ತನ್ನ ಪಾತ್ರದ ಬಗ್ಗೆಯಷ್ಟೇ ಚರ್ಚಿಸುತ್ತಿದ್ದರು. ಬೇರೆ ಯಾವುದೇ ವಿಷಯ ಕುರಿತು ಮಾತನಾಡುತ್ತಿರಲಿಲ್ಲ’ ಎಂದು ಹೇಳಿದರು.