<p><strong>ಮೈಸೂರು</strong>: ‘ರಾಗಶ್ರೀ ಫಿಲಂಸ್ ಪ್ರೊಡಕ್ಷನ್ ನಿರ್ಮಿಸಿರುವ ‘ತ್ರಿಭುಜ’ ಚಲನಚಿತ್ರ ಡಿ.15ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ’ ಎಂದು ಚಿತ್ರದ ನಿರ್ದೇಶಕ, ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನು ನಾನೇ ಬರೆದಿದ್ದೇನೆ. ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಮೈಸೂರಿನ ಕೃಶ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕೃತಿಕಾ ಮತ್ತು ಭೂಮಿಕಾ ಎಂಬ ಹೊಸ ನಟಿಯರನ್ನು ಪರಿಚಯಿಸಲಾಗಿದೆ’ ಎಂದರು.</p>.<p>‘ಸಿನಿಮಾವು ಸ್ನೇಹ, ಪ್ರೀತಿ, ಸಂಬಂಧಗಳ ನಡುವೆ ನಡೆಯುವ ತ್ರಿಕೋನ ಕಥೆಯಾಗಿದ್ದು, ಸೆಂಟಿಮೆಂಟ್, ಸಸ್ಪೆನ್ಸ್ನಿಂದ ಕೂಡಿದೆ. ನಾಲ್ಕು ಹಾಡುಗಳಿದ್ದು, ಮೈಸೂರಿನ ಅತಿಶಯ್ ಜೈನ್ ಸಂಗೀತ ನೀಡಿದ್ದಾರೆ. ಜಗ್ಗು ಮಾಸ್ಟರ್ ನೃತ್ಯ ಸಂಯೋಜನೆ ಹಾಗೂ ಕೆ.ಎಂ.ದೊಡ್ಡಿಯ ಎ.ಟಿ.ಕೃಷ್ಣ ಅವರ ಛಾಯಾಗ್ರಹಣವಿದೆ’ ಎಂದರು.</p>.<p>‘ತಾರಾಗಣದಲ್ಲಿ ಲಯನ್ ಕೋರಿಯರ್ ವೆಂಕಟೇಶ್, ಲಾಲಿ ಪಾಳ್ಯ ಮಹದೇವು, ಮೀನಕೆರೆ ಆಂಜೀನಪ್ಪ, ಯಶೋದಮ್ಮ, ರಮ್ಮನಹಳ್ಳಿ ಸಿದ್ದು, ಸುರೇಶ್ ಗೋಲ್ಡ್, ಸ್ವಾಮಿಗೌಡ ಅಭಿನಯಿಸಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ರಾಗಶ್ರೀ ಫಿಲಂಸ್ ಪ್ರೊಡಕ್ಷನ್ ನಿರ್ಮಿಸಿರುವ ‘ತ್ರಿಭುಜ’ ಚಲನಚಿತ್ರ ಡಿ.15ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ’ ಎಂದು ಚಿತ್ರದ ನಿರ್ದೇಶಕ, ಪತ್ರಕರ್ತ ಎಚ್.ವಿ.ಪುಟ್ಟಸ್ವಾಮಿ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನು ನಾನೇ ಬರೆದಿದ್ದೇನೆ. ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಮೈಸೂರಿನ ಕೃಶ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕೃತಿಕಾ ಮತ್ತು ಭೂಮಿಕಾ ಎಂಬ ಹೊಸ ನಟಿಯರನ್ನು ಪರಿಚಯಿಸಲಾಗಿದೆ’ ಎಂದರು.</p>.<p>‘ಸಿನಿಮಾವು ಸ್ನೇಹ, ಪ್ರೀತಿ, ಸಂಬಂಧಗಳ ನಡುವೆ ನಡೆಯುವ ತ್ರಿಕೋನ ಕಥೆಯಾಗಿದ್ದು, ಸೆಂಟಿಮೆಂಟ್, ಸಸ್ಪೆನ್ಸ್ನಿಂದ ಕೂಡಿದೆ. ನಾಲ್ಕು ಹಾಡುಗಳಿದ್ದು, ಮೈಸೂರಿನ ಅತಿಶಯ್ ಜೈನ್ ಸಂಗೀತ ನೀಡಿದ್ದಾರೆ. ಜಗ್ಗು ಮಾಸ್ಟರ್ ನೃತ್ಯ ಸಂಯೋಜನೆ ಹಾಗೂ ಕೆ.ಎಂ.ದೊಡ್ಡಿಯ ಎ.ಟಿ.ಕೃಷ್ಣ ಅವರ ಛಾಯಾಗ್ರಹಣವಿದೆ’ ಎಂದರು.</p>.<p>‘ತಾರಾಗಣದಲ್ಲಿ ಲಯನ್ ಕೋರಿಯರ್ ವೆಂಕಟೇಶ್, ಲಾಲಿ ಪಾಳ್ಯ ಮಹದೇವು, ಮೀನಕೆರೆ ಆಂಜೀನಪ್ಪ, ಯಶೋದಮ್ಮ, ರಮ್ಮನಹಳ್ಳಿ ಸಿದ್ದು, ಸುರೇಶ್ ಗೋಲ್ಡ್, ಸ್ವಾಮಿಗೌಡ ಅಭಿನಯಿಸಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>