<p><strong>ಬೆಂಗಳೂರು: </strong>ಅತೀಂದ್ರಿಯ (ಟ್ರಾನ್ಸೆಂಡೆಂಟಲ್) ಕಥನಗಳ ಸಿನಿಮಾಗಳಲ್ಲಿ ಆಳವಾದ ಅಭಿವ್ಯಕ್ತಿಯ ಹುಡುಕಾಟವಿರುತ್ತದೆ ಮತ್ತು ಅದು ಪ್ರೇಕ್ಷಕನನ್ನು ತಾತ್ವಿಕವಾದ ಚಿಂತನೆಗೆ ಒಡ್ಡುತ್ತದೆ ಎಂದು ಶ್ರೀಲಂಕಾದ ಚಿತ್ರ ನಿರ್ದೇಶಕ ವಿಮುಕ್ತಿ ಜಯಸುಂದರ ಅವರು ಅಭಿಪ್ರಾಯಪಟ್ಟರು.</p>.<p>ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಐದನೇ ದಿನವಾದ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸಿನಿಮಾಗಳು ಅಭಿವ್ಯಕ್ತಿ ಸಾತಂತ್ರ್ಯವನ್ನು ಎತ್ತಿಹಿಡಿಯುವ ಮೂಲಕ ಪ್ರೇಕ್ಷಕನಿಗೆ ಮಿತಿ ಇಲ್ಲದ ಅನುಭವ ನೀಡುತ್ತವೆ ಎಂದು ಹೇಳಿದರು.</p>.<p>ಪ್ರೇಕ್ಷಕ ಮತ್ತು ಪರದೆಯ ನಡುವೆ ತನ್ಮಯತೆ ಮೂಡಿದಾಗ ಮಾತ್ರ ಆತ ಸಿನಿಮಾದೊಳಗಿನ ಜಗತ್ತಿಗೆ ತೆರೆದುಕೊಳ್ಳುತ್ತಾನೆ ಎಂದರು.</p>.<p>‘ನಾನು ಚಿಕ್ಕವನಾಗಿದ್ದಾಗ ಅಮ್ಮ ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಚಿತ್ರಮಂದಿರ<br />ದಲ್ಲಿ ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಪ್ರೇಕ್ಷಕರು ಬಿಳಿಯ ಪರದೆಯನ್ನೇ ನೋಡಿ ಕಾತರದಿಂದ ಕಾಯುತ್ತಿರುವುದನ್ನು ಕಂಡಾಗ ನನಗೆ ಅಚ್ಚರಿಯಾಗುತ್ತಿತ್ತು. ಆ ಪರದೆಯಲ್ಲಿ ಸಿನಿಮಾ ಎಂಬ ಮಾಂತ್ರಿಕ ಜಗತ್ತು ಮೂಡಿ ಬಂದಾಗ ನಾನೂ ತನ್ಮಯನಾಗುತ್ತಿದ್ದೆ. ಈ ಅಚ್ಚರಿಯೇ ಮುಂದೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು’ ಎಂದು ಅವರು ತಮ್ಮ ಸಿನಿ ಪಯಣದ ಹಾದಿಯನ್ನು ಮೆಲುಕು ಹಾಕಿದರು.</p>.<p>‘ಸಿನಿಮಾಗೆ ಯಾವುದೇ ಭಾಷೆಯ ಅಗತ್ಯವಿಲ್ಲ, ಏಕೆಂದರೆ ಅದುವೇ ಒಂದು ಭಾಷೆಯಾಗಿದೆ. ಸಿನಿಮಾ ನಿಮ್ಮನ್ನು ತಲುಪುವುದಿಲ್ಲ. ನೀವೇ ಅದನ್ನು ತಲುಪಬೇಕು. ಹಾಗಿದ್ದರೆ ಮಾತ್ರ ಒಳ್ಳೆಯ ಪ್ರೇಕ್ಷಕರಾಗಲು ಸಾಧ್ಯ’ ಎಂದು ಹೇಳಿದರು.</p>.<p>ಮೌಖಿಕವಾಗಿ ಕಥೆ ಹೇಳುವಾಗ ಅದು ಬೇರೆ ಬೇರೆ ಕೇಳುಗರಲ್ಲಿ ವಿಭಿನ್ನ ಕಲ್ಪನಾಲೋಕವನ್ನು ಸೃಷ್ಟಿಸಿದಂತೆ, ಸಿನಿಮಾ ಕೂಡ ಪ್ರತಿಯೊಬ್ಬ ಪ್ರೇಕ್ಷಕನಿಗೂ ವಿಭಿನ್ನ ಅನುಭವ ನೀಡಬೇಕು. ಚಿತ್ರದಲ್ಲಿ ಪ್ರೇಕ್ಷಕರ ಕಲ್ಪನೆಗೂ ಜಾಗವಿರಬೇಕು ಎಂದು ಸಲಹೆ ನೀಡಿದರು.</p>.<p>ಶ್ರೀಲಂಕಾ ಸಣ್ಣ ದ್ವೀಪ ರಾಷ್ಟ್ರವೆಂಬುದು ಮುಖ್ಯವಲ್ಲ. ಜನರ ಅನುಭವಗಳೇ ಮುಖ್ಯ. ಈ ಕಾರಣಕ್ಕೆ ಅತ್ಯುತ್ತಮ ಚಿತ್ರಗಳು ಅಲ್ಲಿಯೂ ಮೂಡಿಬರುತ್ತಿವೆ ಎಂದು ಹೇಳಿದರು.</p>.<p>‘ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳು ನನ್ನ ದೃಷ್ಟಿಯಲ್ಲಿ ಒಂದೇ. ಕಮರ್ಷಿಯಲ್ ಚಿತ್ರಗಳಿಂದ ಹೆಚ್ಚಿನ ಲಾಭ ಸಿಗಬಹುದು ಮತ್ತು ಶೀಘ್ರ ಪ್ರಸಿದ್ಧಿಯೂ ಲಭಿಸಬಹುದು. ಆದರೆ ಕಲಾತ್ಮಕ ಚಿತ್ರಗಳಿಂದ ಇವುಗಳನ್ನು ನಿರೀಕ್ಷಿಸದಿದ್ದರೂ ಅವು ತಮ್ಮದೇ ಆದ ಛಾಪನ್ನು ಮೂಡಿಸುತ್ತವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅತೀಂದ್ರಿಯ (ಟ್ರಾನ್ಸೆಂಡೆಂಟಲ್) ಕಥನಗಳ ಸಿನಿಮಾಗಳಲ್ಲಿ ಆಳವಾದ ಅಭಿವ್ಯಕ್ತಿಯ ಹುಡುಕಾಟವಿರುತ್ತದೆ ಮತ್ತು ಅದು ಪ್ರೇಕ್ಷಕನನ್ನು ತಾತ್ವಿಕವಾದ ಚಿಂತನೆಗೆ ಒಡ್ಡುತ್ತದೆ ಎಂದು ಶ್ರೀಲಂಕಾದ ಚಿತ್ರ ನಿರ್ದೇಶಕ ವಿಮುಕ್ತಿ ಜಯಸುಂದರ ಅವರು ಅಭಿಪ್ರಾಯಪಟ್ಟರು.</p>.<p>ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಐದನೇ ದಿನವಾದ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸಿನಿಮಾಗಳು ಅಭಿವ್ಯಕ್ತಿ ಸಾತಂತ್ರ್ಯವನ್ನು ಎತ್ತಿಹಿಡಿಯುವ ಮೂಲಕ ಪ್ರೇಕ್ಷಕನಿಗೆ ಮಿತಿ ಇಲ್ಲದ ಅನುಭವ ನೀಡುತ್ತವೆ ಎಂದು ಹೇಳಿದರು.</p>.<p>ಪ್ರೇಕ್ಷಕ ಮತ್ತು ಪರದೆಯ ನಡುವೆ ತನ್ಮಯತೆ ಮೂಡಿದಾಗ ಮಾತ್ರ ಆತ ಸಿನಿಮಾದೊಳಗಿನ ಜಗತ್ತಿಗೆ ತೆರೆದುಕೊಳ್ಳುತ್ತಾನೆ ಎಂದರು.</p>.<p>‘ನಾನು ಚಿಕ್ಕವನಾಗಿದ್ದಾಗ ಅಮ್ಮ ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಚಿತ್ರಮಂದಿರ<br />ದಲ್ಲಿ ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಪ್ರೇಕ್ಷಕರು ಬಿಳಿಯ ಪರದೆಯನ್ನೇ ನೋಡಿ ಕಾತರದಿಂದ ಕಾಯುತ್ತಿರುವುದನ್ನು ಕಂಡಾಗ ನನಗೆ ಅಚ್ಚರಿಯಾಗುತ್ತಿತ್ತು. ಆ ಪರದೆಯಲ್ಲಿ ಸಿನಿಮಾ ಎಂಬ ಮಾಂತ್ರಿಕ ಜಗತ್ತು ಮೂಡಿ ಬಂದಾಗ ನಾನೂ ತನ್ಮಯನಾಗುತ್ತಿದ್ದೆ. ಈ ಅಚ್ಚರಿಯೇ ಮುಂದೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು’ ಎಂದು ಅವರು ತಮ್ಮ ಸಿನಿ ಪಯಣದ ಹಾದಿಯನ್ನು ಮೆಲುಕು ಹಾಕಿದರು.</p>.<p>‘ಸಿನಿಮಾಗೆ ಯಾವುದೇ ಭಾಷೆಯ ಅಗತ್ಯವಿಲ್ಲ, ಏಕೆಂದರೆ ಅದುವೇ ಒಂದು ಭಾಷೆಯಾಗಿದೆ. ಸಿನಿಮಾ ನಿಮ್ಮನ್ನು ತಲುಪುವುದಿಲ್ಲ. ನೀವೇ ಅದನ್ನು ತಲುಪಬೇಕು. ಹಾಗಿದ್ದರೆ ಮಾತ್ರ ಒಳ್ಳೆಯ ಪ್ರೇಕ್ಷಕರಾಗಲು ಸಾಧ್ಯ’ ಎಂದು ಹೇಳಿದರು.</p>.<p>ಮೌಖಿಕವಾಗಿ ಕಥೆ ಹೇಳುವಾಗ ಅದು ಬೇರೆ ಬೇರೆ ಕೇಳುಗರಲ್ಲಿ ವಿಭಿನ್ನ ಕಲ್ಪನಾಲೋಕವನ್ನು ಸೃಷ್ಟಿಸಿದಂತೆ, ಸಿನಿಮಾ ಕೂಡ ಪ್ರತಿಯೊಬ್ಬ ಪ್ರೇಕ್ಷಕನಿಗೂ ವಿಭಿನ್ನ ಅನುಭವ ನೀಡಬೇಕು. ಚಿತ್ರದಲ್ಲಿ ಪ್ರೇಕ್ಷಕರ ಕಲ್ಪನೆಗೂ ಜಾಗವಿರಬೇಕು ಎಂದು ಸಲಹೆ ನೀಡಿದರು.</p>.<p>ಶ್ರೀಲಂಕಾ ಸಣ್ಣ ದ್ವೀಪ ರಾಷ್ಟ್ರವೆಂಬುದು ಮುಖ್ಯವಲ್ಲ. ಜನರ ಅನುಭವಗಳೇ ಮುಖ್ಯ. ಈ ಕಾರಣಕ್ಕೆ ಅತ್ಯುತ್ತಮ ಚಿತ್ರಗಳು ಅಲ್ಲಿಯೂ ಮೂಡಿಬರುತ್ತಿವೆ ಎಂದು ಹೇಳಿದರು.</p>.<p>‘ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳು ನನ್ನ ದೃಷ್ಟಿಯಲ್ಲಿ ಒಂದೇ. ಕಮರ್ಷಿಯಲ್ ಚಿತ್ರಗಳಿಂದ ಹೆಚ್ಚಿನ ಲಾಭ ಸಿಗಬಹುದು ಮತ್ತು ಶೀಘ್ರ ಪ್ರಸಿದ್ಧಿಯೂ ಲಭಿಸಬಹುದು. ಆದರೆ ಕಲಾತ್ಮಕ ಚಿತ್ರಗಳಿಂದ ಇವುಗಳನ್ನು ನಿರೀಕ್ಷಿಸದಿದ್ದರೂ ಅವು ತಮ್ಮದೇ ಆದ ಛಾಪನ್ನು ಮೂಡಿಸುತ್ತವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>