ಶೀರ್ಷಿಕೆ ಪೋಸ್ಟರ್ನಲ್ಲಿ ‘ಹೃದಯದ ತುಂಬಾ ಅಳುವಿದೆ, ನಗುವಷ್ಟು ಅದೃಷ್ಟವಂತನಲ್ಲ. ಮರೆಯಾದ ನಗುವಿನಲ್ಲಿ ನಗುವಿಲ್ಲದ ನೋವಿನಲ್ಲಿ ನಾ ನಿನ್ನ ಸೆರೆಯಾಗುವೆ.. ಓ ಬಾಲ್ಯವೇ ನೀ ಮತ್ತೆ ಬಂದುಬಿಡು, ನನ್ನ ಮತ್ತೆ ಮಗುವಾಗಿಸು–ಕುಮಾರ’ ಎಂಬ ಉಲ್ಲೇಖವಿದ್ದು, ಚಿತ್ರಕಥೆ ಏನಿರಬಹುದು ಎಂಬ ಕುತೂಹಲ ಮೂಡಿಸಿದೆ. ಕೀರ್ತಿ ಅವರು ರಚಿಸಿ, ನಿರ್ದೇಶಿಸಿರುವ ಈ ಚಿತ್ರವನ್ನು ಭುವನ್, ಲೋಕೇಶ್.ಎನ್, ಶಿವಣ್ಣ ಎಸ್ ನಿರ್ಮಿಸಿದ್ದಾರೆ. ಅಭಿಷೇಕ್ ಜಿ.ಕಾಸರಗೋಡು ಅವರ ಛಾಯಾಗ್ರಹಣವಿದ್ದು, ರಾಘವೇಂದ್ರ ವಿ. ಸಂಗೀತ ನೀಡಿದ್ದಾರೆ.