ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂದೊಂದಿತ್ತು ಕಾಲ’ದತ್ತ ವಿನಯ್‌ ರಾಜ್‌ಕುಮಾರ್‌

Last Updated 5 ಫೆಬ್ರುವರಿ 2021, 15:38 IST
ಅಕ್ಷರ ಗಾತ್ರ

ಬೆಂಗಳೂರು: ನಟ ರಾಘವೇಂದ್ರ ರಾಜ್‌ಕುಮಾರ್‌ ಅವರ ಹಿರಿಯ ಪುತ್ರರಾದ ನಟ ವಿನಯ್‌ ರಾಜ್‌ಕುಮಾರ್‌ ಹಾಗೂ ಅದಿತಿ ಪ್ರಭುದೇವ ತಾರಾಗಣದ ನೂತನ ಚಿತ್ರಕ್ಕೆ ‘ಅಂದೊಂದಿತ್ತು ಕಾಲ’ ಎಂದು ಶುಕ್ರವಾರ ಶೀರ್ಷಿಕೆ ಇಡಲಾಗಿದೆ.

ಶೀರ್ಷಿಕೆ ಪೋಸ್ಟರ್‌ನಲ್ಲಿ ‘ಹೃದಯದ ತುಂಬಾ ಅಳುವಿದೆ, ನಗುವಷ್ಟು ಅದೃಷ್ಟವಂತನಲ್ಲ. ಮರೆಯಾದ ನಗುವಿನಲ್ಲಿ ನಗುವಿಲ್ಲದ ನೋವಿನಲ್ಲಿ ನಾ ನಿನ್ನ ಸೆರೆಯಾಗುವೆ.. ಓ ಬಾಲ್ಯವೇ ನೀ ಮತ್ತೆ ಬಂದುಬಿಡು, ನನ್ನ ಮತ್ತೆ ಮಗುವಾಗಿಸು–ಕುಮಾರ’ ಎಂಬ ಉಲ್ಲೇಖವಿದ್ದು, ಚಿತ್ರಕಥೆ ಏನಿರಬಹುದು ಎಂಬ ಕುತೂಹಲ ಮೂಡಿಸಿದೆ. ಕೀರ್ತಿ ಅವರು ರಚಿಸಿ, ನಿರ್ದೇಶಿಸಿರುವ ಈ ಚಿತ್ರವನ್ನು ಭುವನ್‌, ಲೋಕೇಶ್‌.ಎನ್‌, ಶಿವಣ್ಣ ಎಸ್‌ ನಿರ್ಮಿಸಿದ್ದಾರೆ. ಅಭಿಷೇಕ್‌ ಜಿ.ಕಾಸರಗೋಡು ಅವರ ಛಾಯಾಗ್ರಹಣವಿದ್ದು, ರಾಘವೇಂದ್ರ ವಿ. ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT