ಚಿತ್ರದ ನಿರ್ದೇಶಕ ಪವನ್ ಭಟ್ ಈ ಮೊದಲು ಆಪರೇಶನ್ ಅಲಮೇಲಮ್ಮ, ಮಾಯಾಬಜಾರ್, ಅಳಿದು ಉಳಿದವರು, ರಾಂಚಿ ಮೊದಲಾದ ಚಿತ್ರಗಳಿಗೆ ಬರಹಗಾರನಾಗಿ, ಗೀತ ಸಾಹಿತಿಯಾಗಿ ಕೆಲಸ ಮಾಡಿದ್ದಾರೆ. ಮೊದಲ ಬಾರಿ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಥೆ, ಚಿತ್ರಕಥೆ , ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯೂ ನಿರ್ದೇಶಕರದ್ದೇ ಆಗಿದ್ದು, ಅವರಿಗೆಬಿ ಪ್ರವೀಣ್ ಕೈಜೋಡಿಸಿದ್ದಾರೆ.