<p>`ಪ್ರೇಮದಲ್ಲಿ ನಿರಾಸೆಯಾದಾಗ ತ್ಯಾಗ ಮನೋಭಾವದಿಂದ ಬಾಳಬೇಕು~ ಎಂಬ ಸಂದೇಶ ಹೊತ್ತು ಬರಲಿರುವ ಸಿನಿಮಾ `ಏಂಜಲ್~. ಗೀತಪ್ರಿಯ, ವೈ.ಆರ್.ದಾಸ್, ಸುಂದರನಾಥ ಸುವರ್ಣ ಅವರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವುಳ್ಳ ದಯಾಕರ್ ವಿ. ರಾವ್ ಈ ಚಿತ್ರದ ನಿರ್ದೇಶಕರು.<br /> <br /> `ಏಂಜಲ್~ ಅಂದರೆ ದೇವಕನ್ಯೆ. ಯಾರಿಗೂ ದಕ್ಕದ ದೇವತೆಯಿವಳು. ಮರೀಚಿಕೆಯಂಥ ದೇವಕನ್ಯೆಗಿಂತಲೂ ನಿಜವಾದ ಪ್ರೀತಿ ಮುಖ್ಯ ಎಂಬುದನ್ನು ಚಿತ್ರದಲ್ಲಿ ತೋರಿಸಲಿದ್ದೇವೆ. ಇದು ತ್ರಿಕೋನ ಪ್ರೇಮಕತೆ. ನಾಗಕಿರಣ್ ನಾಯಕ. ತುಶಾಲಿ ದಾಸ್ ಮತ್ತು ರೂಪಿಕಾ ನಾಯಕಿಯರು. ಸಿನಿಮಾದ ಕೊನೆಯಲ್ಲಿ ತಿರುವು ಇರುತ್ತದೆ. <br /> <br /> ಆಗ ಬರುವ ಒಂದು ವಿಶೇಷ ಪಾತ್ರವನ್ನು ಅರ್ಜುನ್ ನಿರ್ವಹಿಸುತ್ತಿದ್ದಾರೆ. ಅವರು ನಿರ್ಮಾಪಕರ ಅಕ್ಕನ ಮಗ. ಮನರಂಜನೆ ನಮ್ಮ ಚಿತ್ರದ ಪ್ರಮುಖ ಉದ್ದೇಶ. ಚಿತ್ರ ಗೆದ್ದೇ ಗೆಲ್ಲುವ ವಿಶ್ವಾಸ ಇದೆ. 30 ದಿನಗಳಲ್ಲಿ ಚಿತ್ರೀಕರಣ ಮುಗಿಸುವೆವು~ ಎನ್ನುವ ನಿರ್ದೇಶಕರ ಮಾತಿನಲ್ಲಿ ಆತ್ಮವಿಶ್ವಾಸವಿತ್ತು.<br /> <br /> `ಏಂಜಲ್~ ಎನ್ನುವ ಹೆಸರು ಅಂಜಲಿ ಮತ್ತು ನಂದಿನಿ ಎಂಬ ನಾಯಕಿಯರ ಹೆಸರುಗಳ ಮೊದಲ ಅಕ್ಷರಗಳ ಸಹಾಯದಿಂದ ಹೊಳೆಯಿತು ಎಂದು ಹೇಳಿದ್ದು, ಚಿತ್ರದ ನಾಯಕ ನಾಗಕಿರಣ್. `ಈ ಚಿತ್ರದಲ್ಲಿ ಗರ್ಲ್ಫ್ರೆಂಡಿಗೂ ಅತ್ತೆಯ ಮಗಳಿಗೂ ವ್ಯತ್ಯಾಸ ತಿಳಿಯಲಿದೆ. ಪ್ರಮುಖ ಸ್ಟಾರ್ಗಳ ಹೆಸರನ್ನು ಇಟ್ಟುಕೊಂಡು ಒಂದು ರ್ಯಾಪೋ ಸಾಂಗ್ ಮಾಡುತ್ತಿರುವುದು ವಿಶೇಷ~ ಎಂದವರು ಹೇಳಿದರು. <br /> <br /> ತುಶಾಲಿ ದಾಸ್ ಅವರಿಗೆ ಇದು ಮೊದಲ ಸಿನಿಮಾ. ಮುಂಬೈನವರಾದ ಅವರು ನಸುನಗುತ್ತಲೇ, `ತುಂಬಾ ಎಕ್ಸೈಟ್ ಆಗಿರುವೆ. ಆಧುನಿಕ ಹುಡುಗಿಯ ಪಾತ್ರ ನನ್ನದು. ಚಿತ್ರ ಬ್ರೇಕ್ ನೀಡುವ ವಿಶ್ವಾಸ ಇದೆ~ ಎಂದರು.<br /> <br /> `ಬಾಲ್ಯದ ಗೆಳೆಯರು ಜೀವನವಿಡೀ ಹೇಗಿರುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ನನ್ನದು ಬೋಲ್ಡ್ ಜೊತೆಗೆ ಜವಾಬ್ದಾರಿಯುತ ಪಾತ್ರ~ ಎನ್ನುವುದು ಮತ್ತೊಬ್ಬ ನಾಯಕಿ ರೂಪಿಕಾ ಚಿಲಿಪಿಲಿ.<br /> <br /> ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮೋಹನ್ ಜುನೇಜಾ ಅವರಿಗಿದು ಸಂಭಾಷಣೆಕಾರರಾಗಿ 16ನೇ ಚಿತ್ರವಂತೆ. ಸಂಗೀತ ನಿರ್ದೇಶಕ ಅನಂತ ಆರ್ಯನ್ ಸ್ಥಳೀಯ ಗಾಯಕರಿಂದಲೇ ಹಾಡಿಸಿರುವುದಾಗಿ ನುಡಿದರು.<br /> <br /> ನಿರ್ಮಾಪಕ ಗೋಕುಲ್ ರಘು ಅವರು ಈ ಮೊದಲ ಲೈಫ್ಸ್ಟೈಲ್~ ಎಂಬ ಸಿನಿಮಾ ಆರಂಭಿಸಿ, ಪಾಲುದಾರರ ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ತುಂಬು ಉತ್ಸಾಹದಿಂದ `ಏಂಜಲ್~ ಆರಂಭಿಸಿದ್ದಾರೆ. ಒಂದೂವರೆ ಕೋಟಿ ಬಜೆಟ್ನಲ್ಲಿ ಸಿನಿಮಾ ಪೂರ್ಣಗೊಳಿಸುವ ಯೋಜನೆ ಅವರದು. <br /> <br /> ಶೇ 70ರಷ್ಟು ಬೆಂಗಳೂರಿನಲ್ಲಿ, ಉಳಿದ ದೃಶ್ಯಗಳನ್ನು ಭಟ್ಕಳ, ಚಿಕ್ಕಮಗಳೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಿರುವ ಚಿತ್ರತಂಡ ಗೀತೆಗಳಿಗೆ ಬ್ಯಾಂಕಾಕ್, ಸಿಂಗಾಪುರಕ್ಕೆ ಹಾರಲಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಪ್ರೇಮದಲ್ಲಿ ನಿರಾಸೆಯಾದಾಗ ತ್ಯಾಗ ಮನೋಭಾವದಿಂದ ಬಾಳಬೇಕು~ ಎಂಬ ಸಂದೇಶ ಹೊತ್ತು ಬರಲಿರುವ ಸಿನಿಮಾ `ಏಂಜಲ್~. ಗೀತಪ್ರಿಯ, ವೈ.ಆರ್.ದಾಸ್, ಸುಂದರನಾಥ ಸುವರ್ಣ ಅವರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವುಳ್ಳ ದಯಾಕರ್ ವಿ. ರಾವ್ ಈ ಚಿತ್ರದ ನಿರ್ದೇಶಕರು.<br /> <br /> `ಏಂಜಲ್~ ಅಂದರೆ ದೇವಕನ್ಯೆ. ಯಾರಿಗೂ ದಕ್ಕದ ದೇವತೆಯಿವಳು. ಮರೀಚಿಕೆಯಂಥ ದೇವಕನ್ಯೆಗಿಂತಲೂ ನಿಜವಾದ ಪ್ರೀತಿ ಮುಖ್ಯ ಎಂಬುದನ್ನು ಚಿತ್ರದಲ್ಲಿ ತೋರಿಸಲಿದ್ದೇವೆ. ಇದು ತ್ರಿಕೋನ ಪ್ರೇಮಕತೆ. ನಾಗಕಿರಣ್ ನಾಯಕ. ತುಶಾಲಿ ದಾಸ್ ಮತ್ತು ರೂಪಿಕಾ ನಾಯಕಿಯರು. ಸಿನಿಮಾದ ಕೊನೆಯಲ್ಲಿ ತಿರುವು ಇರುತ್ತದೆ. <br /> <br /> ಆಗ ಬರುವ ಒಂದು ವಿಶೇಷ ಪಾತ್ರವನ್ನು ಅರ್ಜುನ್ ನಿರ್ವಹಿಸುತ್ತಿದ್ದಾರೆ. ಅವರು ನಿರ್ಮಾಪಕರ ಅಕ್ಕನ ಮಗ. ಮನರಂಜನೆ ನಮ್ಮ ಚಿತ್ರದ ಪ್ರಮುಖ ಉದ್ದೇಶ. ಚಿತ್ರ ಗೆದ್ದೇ ಗೆಲ್ಲುವ ವಿಶ್ವಾಸ ಇದೆ. 30 ದಿನಗಳಲ್ಲಿ ಚಿತ್ರೀಕರಣ ಮುಗಿಸುವೆವು~ ಎನ್ನುವ ನಿರ್ದೇಶಕರ ಮಾತಿನಲ್ಲಿ ಆತ್ಮವಿಶ್ವಾಸವಿತ್ತು.<br /> <br /> `ಏಂಜಲ್~ ಎನ್ನುವ ಹೆಸರು ಅಂಜಲಿ ಮತ್ತು ನಂದಿನಿ ಎಂಬ ನಾಯಕಿಯರ ಹೆಸರುಗಳ ಮೊದಲ ಅಕ್ಷರಗಳ ಸಹಾಯದಿಂದ ಹೊಳೆಯಿತು ಎಂದು ಹೇಳಿದ್ದು, ಚಿತ್ರದ ನಾಯಕ ನಾಗಕಿರಣ್. `ಈ ಚಿತ್ರದಲ್ಲಿ ಗರ್ಲ್ಫ್ರೆಂಡಿಗೂ ಅತ್ತೆಯ ಮಗಳಿಗೂ ವ್ಯತ್ಯಾಸ ತಿಳಿಯಲಿದೆ. ಪ್ರಮುಖ ಸ್ಟಾರ್ಗಳ ಹೆಸರನ್ನು ಇಟ್ಟುಕೊಂಡು ಒಂದು ರ್ಯಾಪೋ ಸಾಂಗ್ ಮಾಡುತ್ತಿರುವುದು ವಿಶೇಷ~ ಎಂದವರು ಹೇಳಿದರು. <br /> <br /> ತುಶಾಲಿ ದಾಸ್ ಅವರಿಗೆ ಇದು ಮೊದಲ ಸಿನಿಮಾ. ಮುಂಬೈನವರಾದ ಅವರು ನಸುನಗುತ್ತಲೇ, `ತುಂಬಾ ಎಕ್ಸೈಟ್ ಆಗಿರುವೆ. ಆಧುನಿಕ ಹುಡುಗಿಯ ಪಾತ್ರ ನನ್ನದು. ಚಿತ್ರ ಬ್ರೇಕ್ ನೀಡುವ ವಿಶ್ವಾಸ ಇದೆ~ ಎಂದರು.<br /> <br /> `ಬಾಲ್ಯದ ಗೆಳೆಯರು ಜೀವನವಿಡೀ ಹೇಗಿರುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ನನ್ನದು ಬೋಲ್ಡ್ ಜೊತೆಗೆ ಜವಾಬ್ದಾರಿಯುತ ಪಾತ್ರ~ ಎನ್ನುವುದು ಮತ್ತೊಬ್ಬ ನಾಯಕಿ ರೂಪಿಕಾ ಚಿಲಿಪಿಲಿ.<br /> <br /> ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮೋಹನ್ ಜುನೇಜಾ ಅವರಿಗಿದು ಸಂಭಾಷಣೆಕಾರರಾಗಿ 16ನೇ ಚಿತ್ರವಂತೆ. ಸಂಗೀತ ನಿರ್ದೇಶಕ ಅನಂತ ಆರ್ಯನ್ ಸ್ಥಳೀಯ ಗಾಯಕರಿಂದಲೇ ಹಾಡಿಸಿರುವುದಾಗಿ ನುಡಿದರು.<br /> <br /> ನಿರ್ಮಾಪಕ ಗೋಕುಲ್ ರಘು ಅವರು ಈ ಮೊದಲ ಲೈಫ್ಸ್ಟೈಲ್~ ಎಂಬ ಸಿನಿಮಾ ಆರಂಭಿಸಿ, ಪಾಲುದಾರರ ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ತುಂಬು ಉತ್ಸಾಹದಿಂದ `ಏಂಜಲ್~ ಆರಂಭಿಸಿದ್ದಾರೆ. ಒಂದೂವರೆ ಕೋಟಿ ಬಜೆಟ್ನಲ್ಲಿ ಸಿನಿಮಾ ಪೂರ್ಣಗೊಳಿಸುವ ಯೋಜನೆ ಅವರದು. <br /> <br /> ಶೇ 70ರಷ್ಟು ಬೆಂಗಳೂರಿನಲ್ಲಿ, ಉಳಿದ ದೃಶ್ಯಗಳನ್ನು ಭಟ್ಕಳ, ಚಿಕ್ಕಮಗಳೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಿರುವ ಚಿತ್ರತಂಡ ಗೀತೆಗಳಿಗೆ ಬ್ಯಾಂಕಾಕ್, ಸಿಂಗಾಪುರಕ್ಕೆ ಹಾರಲಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>