ಹೆಂಡತಿಯನ್ನು ಅನುಮಾನಿಸುವ ಗಂಡ,ಪೇಯಸಿಯನ್ನು ಅನುಮಾನಿಸುವ ಪ್ರಿಯಕರ ಆವಾಂತರಕ್ಕೆ ಸಿಕ್ಕಿ ಹಾಕಿಕೊಳ್ಳುವ ಸನ್ನಿವೇಶಗಳು ಹಾಸ್ಯಮಯವಾಗಿ ಮೂಡಿಬಂದವು.ಸಂತೋಷ್ ಮೈಸೂರು ರಂಗವಿನ್ಯಾಸ, ಸಂಗೀತ ಮತ್ತು ನಿರ್ದೇಶನದ ಜತೆ ಅನುಮಾನಪ್ಪನ ಪಾತ್ರವನ್ನೂ ನಿರ್ವಹಿಸಿದರು. ಟಿ.ಎಲ್.ಕೆ. ಮೂರ್ತಿ, ಶಶಿಭೂಷಣ್, ಸೀಮಾ ಕೆ.ಎಸ್., ಮಂಜುನಾಥ್ ಎಂ., ರಾಜಶ್ರೀ ರಮೇಶ್, ಸಾಹಿತ್ಯ, ಅಶ್ವಿನ್ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು. ವಾಸುದೇವ್ ಬೆಳಕು, ರಾಮಕೃಷ್ಣ ಕನ್ನರ್ಪಾಡಿ ಪ್ರಸಾದನ ಮತ್ತು ಶಿವಕುಮಾರ್ ಪಾಟೀಲ ಸಂಗೀತದ ಮೂಲಕ ನಾಟಕದ ಮೆರುಗು ಹೆಚ್ಚಿಸಿದರು.