ಕರಣಂ ಪವನ್ ಪ್ರಸಾದ್ ರಚಿಸಿರುವ ’ಭವ ಎನಗೆ ಹಿಂಗಿತು‘ ಹೊಸ ನಾಟಕ ಇದೇ 16ರಂದು ಪ್ರದರ್ಶನಗೊಳ್ಳಲಿದೆ.
ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಸಂಜೆ 4.30 ಹಾಗೂ 7 ಗಂಟೆಗೆ ಎರಡು ಪ್ರದರ್ಶನ ನಡೆಯಲಿದೆ. ಪ್ರವರ ಆರ್ಟ್ಸ್ ಸ್ಟುಡಿಯೋ ಈ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.
ಒಬ್ಬ ಪ್ರಸಿದ್ಧ ಬರಹಗಾರ ಪ್ರಭು ಹಾಗೂ ಆತನ ಮಗ ಚಿರಂತನ ಬದುಕಿನ ಸುತ್ತ ಹೆಣೆದಿರುವ ಕಥೆಯೇ ಭವ ಎನಗೆ ಹಿಂಗಿತು ನಾಟಕವಾಗಿದೆ. ಪ್ರಭುವಿನ ದಿನನಿತ್ಯದ ಬದುಕು, ಆತನ ಮಾನಸಿಕ ತುಮುಲಗಳು ಕಥೆಯ ಮುಖ್ಯ ಹಂದರ.
ಕೆಲಸದಾಕೆ ಸರಳ ಮತ್ತು ಆತನ ಗಂಡ ರಾಜು ಈ ಕಥೆಗೆ ಕುತೂಹಲಕಾರಿ ತಿರುವುಗಳನ್ನು ನೀಡುತ್ತಾರೆ. ಸಂಭಾಷಣೆಯ ಜೊತೆಗಿನ ಅಭಿನಯ ಹಾಗೂ ರೋಚಕ ಕಥೆಯಿಂದ ನಾಟಕ ಕುತೂಹಲಕಾರಿ.