ಹೌದು, ಈ ವಾರದ ಅಂತ್ಯದಲ್ಲಿ ಬಿಗ್ಬಾಸ್ ಮನೆ ಸದಸ್ಯರಿಗೆ ಲಕ್ಷುರಿ ಬಜೆಟ್ ಖರೀದಿಸುವ ಅವಕಾಶ ನೀಡಿದೆ. ಆದರೆ, ದಿನಸಿ ವಸ್ತುಗಳನ್ನು ಮನೆ ಮಂದಿ ತಮ್ಮ ಬಳಿ ಇರುವ ಹಣದಿಂದ ಖರೀದಿಸಬೇಕಾಗಿದೆ. ಸದ್ಯ ಈ ಲಕ್ಷುರಿ ಬಜೆಟ್ ಮನೆ ಸ್ಪರ್ಧಿಗಳ ಜಗಳಕ್ಕೆ ಕಾರಣವಾಗಿದೆ.
ಯಾರ ಬಳಿ ಇರುವ ಹಣವನ್ನು ನೀಡಿ ದಿನಸಿಯನ್ನ ಖರೀದಿಸಬೇಕು ಎಂಬ ಪ್ರಶ್ನೆ ಮನೆ ಮಂದಿಯಲ್ಲಿ ಭಿನ್ನಾಭಿಪ್ರಾಯವನ್ನು ಮೂಡಿಸಿದೆ. ಈ ಕುರಿತು ಮಾತನಾಡಿರುವ ವಿನಯ್, ‘ಲೀಡರ್ಗಳ ಬಳಿ ಜಾಸ್ತಿ ಹಣವಿದೆ’ ಎಂದು ಹೇಳಿದ್ದಾರೆ. ಇದಕ್ಕೆ, ಸಂಗೀತಾ ‘ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ’ ಎಂದು ತನಿಷಾ ಬಳಿ ಕೇಳಿದ್ದಾರೆ. ಆದರೆ ತನಿಷಾ ಅವರು ಇದಕ್ಕೆ ಒಪ್ಪಿಕೊಂಡಿಲ್ಲ. ‘ದಿನಸಿ ಬೇಕಾಗಿರುವುದು ಮನೆಯ ಎಲ್ಲ ಸದಸ್ಯರಿಗೆ. ಹಾಗಾಗಿ ಎಲ್ಲರೂ ಹಣ ವ್ಯಯಿಸಬೇಕು’ ಎಂದು ವಾದ ಮಾಡಿದ್ದಾರೆ.