ಭಾನುವಾರದ ಸಂಚಿಕೆಯ ಎಲಿಮಿನೇಶನ್ ವೇಳೆ, ಅಂತಿಮವಾಗಿ ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಮತ್ತು ದೀಪಿಕಾ ದಾಸ್ ಉಳಿದಿದ್ದರು. ನೀವು ಮೂವರು 'ಪ್ರವೀಣ'ರಾಗಿದ್ದು, ನಿಮ್ಮಲ್ಲಿ ಯಾರೇ ಎಲಿಮಿನೇಟ್ ಆದರೂ ಅದು ‘ಹಾರಿಬಲ್ ಎಲಿಮಿನೇಶನ್’ ಎಂದು ನಿರೂಪಕ ಸುದೀಪ್ ಹೇಳಿದರು. ಏಕೆಂದರೆ, ಮೂವರೂ ಈ ಹಿಂದಿನ ಸೀಸನ್ಗಳಲ್ಲಿ ಗಮನ ಸೆಳೆದಿದ್ದ ಸ್ಪರ್ಧಿಗಳು ಹಾಗೂ ಗೆಲುವಿನ ಸನಿಹಕ್ಕೆ ಬಂದವರಾಗಿದ್ದರು.