ಅದೇ ಸಂದರ್ಭ ಅಸಮಾಧಾನ ತೋರ್ಪಡಿಸಿದ್ದ ನವಾಜ್, ನನಗೆ ಟಾಸ್ಕ್ ಆಡಲು ಅವಕಾಶ ಸಿಗುತ್ತಿಲ್ಲ. ನಾನು ಟಾಸ್ಕ್ ಆಡದೇ ಇದ್ದರೆ ನನ್ನ ಬಗ್ಗೆ ವೀಕ್ಷಕರಿಗೆ ಹೇಗೆ ತಿಳಿಯುತ್ತದೆ? ಅವರು ಮತ ಹಾಕುತ್ತಾರಾ? ನಾನು ಹೊರಗೆ ಹೋಗಬಹುದು ಎಂದು ನೋವು ತೋಡಿಕೊಂಡಿದ್ದರು. ಆ ಮಾತು ನಿಜವೇ ಆಗಿ ಹೋಯಿತು. ಮನೆಯಿಂದ ಹೊರಬಂದ ಬಳಿಕ ವೇದಿಕೆ ಮೇಲೆ ನಿಂತು, ‘ಅಪ್ಪ ಇಲ್ಲಿ ನಾನು ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಿ ನಿನ್ನ ಘನತೆ ಎತ್ತಿಹಿಡಿಯುತ್ತೇನೆ’ಎಂದು ನವಾಜ್ ಕಣ್ಣೀರು ಹಾಕಿದರು.